ಬೈಂದೂರು : ಮಾಜಿ ಬೈಂದೂರು ಶಾಸಕರಾದ ಗೋಪಾಲ್ ಪುಜಾರಿ ಅವರ ಪುತ್ರ ಸೂರಜ್ ಜಿ ಪೂಜರಿ ಶಿರೂರು ಭಾಗದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.
ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಗಳಾದ ಶ್ರೀಯುತ ಸೂರಜ್ ಜಿ ಪೂಜಾರಿ ರವರು ಇಂದು ಶಿರೂರು ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಎಲ್ಲಾ ಶಿರೂರು ಭಾಗದ ಅಲ್ಪಸಂಖ್ಯಾತ ನಾಯಕರೊಂದಿಗೆ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಸದಸ್ಯರೊಂದಿಗೆ ಬೈಂದೂರು ಅಲ್ಪಸಂಖ್ಯಾತ ಘಟಕ ಬೈಂದೂರು ಬ್ಲಾಕ್ ಕಿಸಾನ ಘಟಕದೊಂದಿಗೆ ಭೇಟಿ ನೀಡಿ ಸಮಸ್ಯೆಯ ವಿವರವನ್ನು ತಿಳಿದು ಸದಾ ನಿಮ್ಮೊಂದಿಗೆ ನಾವಿರುತ್ತೇವೆ ಭರವಸೆಯನ್ನು ನೀಡಿದರು.