ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಮೋರ್ಚಾಗಳಿಗೆ ನೂತನ ಅಧ್ಯಕ್ಷರನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರು ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ನಿಯುಕ್ತಿಗೊಂಡಿರುವ ಜಿಲ್ಲಾ ಮೋರ್ಚಾಗಳ ನೂತನ ಅಧ್ಯಕ್ಷರುಗಳ ವಿವರ ಹೀಗಿದೆ :
1. ಎಸ್.ಟಿ. ಮೋರ್ಚಾ :
ಭುಜಂಗ ನಾಯ್ಕ ಸರಳೇಬೆಟ್ಟು
2. ಎಸ್.ಸಿ. ಮೋರ್ಚಾ :
ಡಿ. ಬಿ. ಕೃಷ್ಣ ಮೂರ್ತಿ
3. ರೈತ ಮೋರ್ಚಾ :
ಕಮಲಾಕ್ಷ ಹೆಬ್ಬಾರ್
4. ಹಿಂದುಳಿದ ವರ್ಗಗಳ ಮೋರ್ಚಾ :
ಪ್ರವೀಣ್ ಕುಮಾರ್ ಗುರ್ಮೆ
5. ಯುವ ಮೋರ್ಚಾ :
ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ
6. ಮಹಿಳಾ ಮೋರ್ಚಾ :
ಸಂಧ್ಯಾ ರಮೇಶ್
7. ಅಲ್ಪಸಂಖ್ಯಾತ ಮೋರ್ಚಾ :
ರುಡಾಲ್ಫ್ ಡಿ’ಸೋಜಾ

ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಜನಸೇವಾ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ಈ ನಿಯುಕ್ತಿಯನ್ನು ಮಾಡಲಾಗಿದೆ ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




