ಉಡುಪಿ: ನಗರದ ಸಮೀಪ ವ್ಯಕ್ತಿಯೊಬ್ಬರಿಗೆ ಮಹಿಳೆ ವಂಚನೆ ಮಾಡಿರುವ ಘಟನೆ ಸಂಭವಿಸಿದೆ.
ಶಂಕರಪುರ ನಿವಾಸಿ ಜೊಸ್ಸಿ ರವೀಂದ್ರ ಡಿಕ್ರೂಸ್ ಎಂವರಿಗೆ ವಂಚನೆಯಾಗಿದೆ.
ರವೀಂದ್ರ ಅವರಿಗೆ ಮಹಿಳೆಯೊಬ್ಬಳು ಫೇಸ್ ಬುಕ್ ನಲ್ಲಿ ಪರಿಚಯವಾಗಿ, ಹಣ ಹೊಡಿಕೆ ವಿಚಾರದಲ್ಲಿ ನಗದು ತೆಗೆದುಕೊಂಡು ವಂಚನೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.
ಘಟನೆ ವಿವರ: ಫಿರ್ಯಾದಿದಾರರಾಧ ಜೊಸ್ಸಿ ರವೀಂದ್ರ ಡಿಕ್ರೂಸ್ (54) ಶಂಕರಪುರ ಪೋಸ್ಟ್, ಕಾಪು ಇವರು ವಿದೇಶದಲ್ಲಿ ಮ್ಯಾನೆಜರ್ ಆಗಿ ಉದ್ಯೋಗದಲ್ಲಿದ್ದು ಅನಾರೋಗ್ಯದ ಕಾರಣದಿಂದ 2 ವರ್ಷದ ಹಿಂದೆ ಊರಿಗೆ ಬಂದಿರುತ್ತಾರೆ. ಪಿರ್ಯಾದುದಾರರಿಗೆ ಫೇಸ್ ಬುಕ್ ಮೂಲಕ Arohi Agarwal ಎಂಬ ಮಹಿಳೆಯ ಪರಿಚಯವಾಗಿದ್ದು 2025ರ ಫೆಬ್ರವರಿ ತಿಂಗಳಲ್ಲಿ ಅವಳ ವಾಟ್ಸಾಪ್ ನಂಬ್ರ ನೀಡಿದ್ದು ಪಿರ್ಯಾದಿದಾರರು ಅದರಲ್ಲಿ ಚಾಟ್ ಮಾಡುತ್ತಿದ್ದು ಅವಳು FXCM Gold Trading ಗೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ಮೆಸೇಜ್ ಮಾಡಿದ್ದು ಅದನ್ನು ನಂಬಿದ ಪಿರ್ಯಾದಿದಾರರು ತಮ್ಮ ಶಂಕರಪುರ ಕೆನರಾ ಬ್ಯಾಂಕ್ ಖಾತೆಯಿಂದ ದಿನಾಂಕ 09/04/2025 ರಿಂದ 12/05/2025ರ ವರೆಗೆ ಹಂತ ಹಂತವಾಗಿ ಒಟ್ಟು 75,00,000/- ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ಅದರೆ ಅಪರಿಚಿತ ವ್ಯಕ್ತಿಗಳು ಈತನಕ ಪಿರ್ಯಾದಿದಾರರು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶನ್ನಾಗಲಿ ನೀಡದೇ ವಂಚನೆ ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 21/2025 ಕಲಂ: 66(ಸಿ) 66(ಡಿ)ಐ.ಟಿ. ಆಕ್ಟ ಮತ್ತು 318(4)ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.