ಕೋಟ: ಉಡುಪಿ ಜಿಲ್ಲೆಯ ಕೋಟ ಸಮೀಪ ವ್ಯಕ್ತಿಯೋರ್ವ ರಿಕ್ಷಾದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿರುವಾಗ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿ ರಾಜೇಶ್ ಎಂದು ಗುರುತಿಸಲಾಗಿದೆ.
ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ವಿ ವಸಂತ್ ಕುಮಾರ್ (48), ಆಹಾರ ನಿರೀಕ್ಷಕರು, ಬ್ರಹ್ಮಾವರ ಇವರಿಗೆ ದಿನಾಂಕ 17/09/2025 ರಂದು ಮಣೂರು ಗ್ರಾಮದ ಪಡುಕೆರೆ ಎಂಬಲ್ಲಿ ಅನ್ನ ಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆ ಇಲ್ಲದೇ KA-20-AA-5329 ನೇ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸಂಜೆ 18:30 ಗಂಟೆಗೆ ದಾಳಿ ನಡೆಸಿ, ರಿಕ್ಷಾದಲ್ಲಿ ಅನ್ನಭಾಗ್ಯ ಯೋಜನೆಯಡಿ ಆದ್ಯತಾ ಪಡಿತರ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಸಿಗುವ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿರುವುದು ದೃಢಪಡಿಸಿಕೊಂಡು ರಿಕ್ಷಾದಲ್ಲಿದ್ದ ಒಟ್ಟು 7 ಚೀಲದಲ್ಲಿ ಸಂಗ್ರಹಿಸಿದ್ದ 274.34 Kg ಅಕ್ಕಿ ಸ್ವಾಧೀನಪಡಿಸಿಕೊಂಡು ಆಪಾದಿತ ರಾಜೇಶ್, ಕೋಟತಟ್ಟು ಗ್ರಾಮ ಬ್ರಹ್ಮಾವರ ಹಾಗೂ KA-20-AA-5329 ನೇ ರಿಕ್ಷಾದ ಮೇಲೆ ಕಾನೂನು ಕ್ರಮಕೈಗೊಳ್ಳಬೇಕಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 164/2025 ಕಲಂ: 3,5,6(A), 7 Essentialcomodites Act1955 and U/s3(2),18(1) KarnatakaEssentialcommodities ( public distribution system) Public Control Order 2016 ರಂತೆ ಪ್ರಕರಣ ದಾಖಲಾಗಿರುತ್ತದೆ.