Home Crime ಕುಂದಾಪುರ : ಇಸ್ಪೀಟು ಜುಗಾರಿ‌‌ ಆಟ : ನಾಲ್ಕು ಮಂದಿಯ ಬಂಧನ…!!

ಕುಂದಾಪುರ : ಇಸ್ಪೀಟು ಜುಗಾರಿ‌‌ ಆಟ : ನಾಲ್ಕು ಮಂದಿಯ ಬಂಧನ…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಅಕ್ರಮವಾಗಿ ಇಸ್ಪೀಟು ಜಗಾರಿ‌ ಆಟ ಆಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ನಾಲ್ಕು ಮಂದಿಯನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳು 1) ಸಮರ್ಥ (27), ಎನ್.ಆರ್ ನಗರ, ಕಾರ್ಕಳ ಗ್ರಾಮ, 2) ಕಿಶನ್ (45), ತಗ್ಗರ್ಸೆ ಗ್ರಾಮ, ಬೈಂದೂರು ,3) ಪ್ರದೀಪ (42), ಮಂಗಳೂರು, 4) ನಿಸಾರ್ ಶೇಖ್ (42) ಎಂದು ತಿಳಿದು ಬಂದಿದೆ.

ಕುಂದಾಪುರ ಗ್ರಾಮಾಂತರ ಪೊಲೀಸರು ಜುಗಾರಿ ಆಟ ಆಡುತ್ತಿರುವ ಸ್ಥಳಕ್ಕೆ ದಾಳಿ ನಡೆಸುವಾಗ ಕೆಲವು ಮಂದಿ ಹಾಡಿಯಲ್ಲಿ ಓಡಿ ಹೋಗಿದ್ದಾರೆ.ನಾಲ್ಕು ಮಂದಿಯನ್ನು ‌ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಪ್ರಕರಣದ ವಿವರ : ದಿನಾಂಕ 17/09/2025 ರಂದು ಚಂದ್ರಕಲಾ ಪತ್ತಾರ , ಪೊಲೀಸ್‌ ಉಪನಿರೀಕ್ಷಕರು (ತನಿಖೆ),ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರಿಗೆ ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಅರೆಕಲ್ಲು ಹುಣ್ಸೆಮನೆ ಎಂಬಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆಂದು ಮಾಹಿತಿ ದೊರೆತಿದ್ದು ದಾಳಿ ನಡೆಸಿ ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದ 1) ಸಮರ್ಥ (27), ಎನ್.ಆರ್ ನಗರ, ಕಾರ್ಕಳ ಗ್ರಾಮ, 2) ಕಿಶನ್ (45), ತಗ್ಗರ್ಸೆ ಗ್ರಾಮ, ಬೈಂದೂರು ,3) ಪ್ರದೀಪ (42), ಮಂಗಳೂರು, 4) ನಿಸಾರ್ ಶೇಖ್ (42), ಗುಲ್ವಾಡಿ ಗ್ರಾಮ, ಕುಂದಾಪುರ ತಾಲೂಕು ಇವರನ್ನು ಹಿಡಿದುಕೊಂಡಿದ್ದು ಉಳಿದವರು ಹಾಡಿಯಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾರೆ. ಇಸ್ಪೀಟ್‌ ಜುಗಾರಿ ಆಟಕ್ಕೆ ಬಳಸಿದ 1) ನಗದು ಒಟ್ಟು 11,620/- ರೂಪಾಯಿ, 2) ನೀಲಿ ಬಣ್ಣದ ಪ್ಲಾಸ್ಟಿಕ್‌ -1, 3) ಇಸ್ಪೀಟ್ ಎಲೆಗಳು, 4) ಸ್ಯಾಮ್ ಸಂಗ್ ಎಸ್ 25 ಅಲ್ಟ್ರಾ ಮೊಬೈಲ್‌-01, 5) ವೀವೋ ಮೊಬೈಲ್ ಫೋನ್-01, 6) ರೆಡ್ ಮೀ ಮೊಬೈಲ್ -01, 7) ವೀವೋ ಮೊಬೈಲ್ ಫೋನ್ -01, 8) KA-19-MK-4394 ನೇ ಸ್ಯಾಂಟ್ರೋ ಕಾರು-01, ನೇದನ್ನು ಸ್ವಾದೀನಪಡಿಸಿಕೊಂಡು ಪ್ರಕರಣ ದಾಖಲಿಸಿರುವುದಾಗಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2025 ಕಲಂ: 87 KP Act ರಂತೆ ಪ್ರಕರಣ ದಾಖಲಾಗಿರುತ್ತದೆ.