ಮೂಡಬಿದಿರೆ : ಟ್ರಕ್ಕಿಂಗ್ ಗೆಂದು ಮೂಡುಬಿದಿರೆಯ ಕೊಣಾಜೆಕಲ್ಲಿಗೆ ಬಂದಿದ್ದ ಓರ್ವ ಯುವಕ ಹೃದಯಾಘಾತಕ್ಕೆ ಬಲಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಕಾಸರಗೋಡಿನ ಓರ್ವ ಹಾಗೂ ಪುತ್ತೂರಿನ ಓರ್ವ ಯುವಕ ಕೊಣಾಜೆಕಲ್ಲಿಗೆ ಟ್ರಕ್ಕಿಂಗ್ ಬಂದಿದ್ದರು.
ಈರ್ವರು ಯುವಕರು ಕಲ್ಲು ಮೇಲೇರುತ್ತಿದ್ದಂತೆ ಓರ್ವ ವಾಂತಿ ಮಾಡಿಕೊಂಡನೆನ್ನಲಾಗಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.