Home Kundapura News ಕುಂದಾಪುರ: 40 ವರ್ಷದಿಂದ ನೆನೆ ಗುದಿಗೆ ಬಿದ್ದಿರುವ ಕೆರೆಯನ್ನು ಪುನರ್ಚೇತನ ಗೊಳ್ಳಿಸಿದ : ಪುರಸಭೆ ಸದಸ್ಯ…!!

ಕುಂದಾಪುರ: 40 ವರ್ಷದಿಂದ ನೆನೆ ಗುದಿಗೆ ಬಿದ್ದಿರುವ ಕೆರೆಯನ್ನು ಪುನರ್ಚೇತನ ಗೊಳ್ಳಿಸಿದ : ಪುರಸಭೆ ಸದಸ್ಯ…!!

ಕುಂದಾಪುರ: ಕಳೆದ 40 ವರ್ಷದಿಂದ ಸಾರ್ವಜನಿಕರಿಗೆ ಅನುಕೂಲವಾಗುವ ಕೆರೆಯನ್ನು ಪುನರ್ಚೇತನ ಗೊಳ್ಳಿಸಿದ ಕುಂದಾಪುರ ಪುರಸಭೆ ಮಾಜಿ ಸದಸ್ಯ ರಾಘವೇಂದ್ರ ಖಾರ್ವಿ ಯವರು ತನ್ನ ಅವಧಿಯಲ್ಲಿ ಕಾಮಗಾರಿ ಮಾಡಿ ಜನರ ಮೆಚ್ಚುಗೆ ಭಾಜನರಾಗಿದ್ದಾರೆ

ಹೌದು ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಮದ್ದುಗುಡ್ಡೆ ಭಾಗದಲ್ಲಿ ಸ್ಪರ್ಧಿಸಿ ಜಯಗಳಿಸಿದರು ತನ್ನ ಅವಧಿಯಲ್ಲಿ ಸಾಕಷ್ಟು ಕಾಮಗಾರಿ ಮಾಡಿದ್ದಾರೆ ಎನ್ನಲಾಗುತ್ತಿದೆ, ಹಾಗೂ ಮುದ್ದುಗುಡ್ಡೆ ಭಾಗದ ಹೊಸ ಕೇರಿ ಕೆರೆಯನ್ನು ಪುರಸಭೆಯ ಅನುದಾನದ ಅಡಿಯಲ್ಲಿ ಕೆರೆಯ ಕೆಸರನ್ನು ಹೊಳೆತ್ತಿ 40 ವರ್ಷದಿಂದ ನೆನೆ ಗುದಿಗೆ ಬಿದ್ದಿರುವ ಕೆರೆಯನ್ನು ಪುನರ್ಚೇತನ ಗೊಳ್ಳಿಸಿ ಸ್ಥಳೀಯರ ಅನುಕೂಲಕ್ಕಾಗಿ ಕೆರೆಯ ತಡೆಗೋಡೆಯನ್ನು ನಿರ್ಮಾಣ ಮಾಡಿ ಬಣ್ಣ ಹಚ್ಚಿ ಸುತ್ತಲು ಕಬ್ಬಿಣದ ಕಂಬಿಯನ್ನು ಅಳವಡಿಸಿ ಸುಂದರ ಕೆರೆಯನ್ನಾಗಿ ಮಾಡಲು ಶ್ರಮಿಸಿದ ಮಾಜಿ ಪುರಸಭೆ ಸದಸ್ಯ ರಾಘವೇಂದ್ರ ಖಾರ್ವಿ ಯವರ ಸಾಧನೆಯ ಕಾಮಗಾರಿಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಮದ್ದು ಗುಡ್ಡೆ ಭಾಗದ ಸ್ಥಳೀಯರು ಪ್ರಶಂಸೆ ಪಾತ್ರರಾಗಿದ್ದಾರೆ,

ಕಳೆದ ಐದು ವರ್ಷಗಳಲ್ಲಿ ಮದ್ದು ಗುಡ್ಡೆ ಕೋಡಿ ಸಂಪರ್ಕಿಸುವ ರಿಂಗ್ ರೋಡ್ ರಸ್ತೆ ಕಾಮಗಾರಿ ನಿರ್ಮಾಣ ಮಾಡಲು ಶ್ರಮಿಸಿದ ರಾಘವೇಂದ್ರ ಖಾರ್ವಿ ಯವರು ಎಂಬ ಹೆಗ್ಗಳಿಕೆಗೆ ಮುಂಚೂಣಿಯಲಿದ್ದಾರೆ

ಮುಂದಿನ ಸಾಧನೆ ಇನ್ನಷ್ಟು ಉತ್ತಂಗಕ್ಕೆ ಏರಲಿ ಎನ್ನುವುದೇ ಸಾರ್ವಜನಿಕರ ಅಭಿಪ್ರಾಯವಾಗಿದೆ