ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪ ಮನೆಯೊಂದರಲ್ಲಿ ಯಾರು ಇಲ್ಲದ ವೇಳೆಯಲ್ಲಿ ಕಳ್ಳರು ಎದುರಿನ ಬಾಗಿಲಿನ ಚಿಲಕ ಮುರಿದು ಒಳಗೆ ಪ್ರವೇಶಿಸಿ ನಗದು ಹಾಗೂ ಚಿನ್ನದ ಚೈನ್ ಕಳ್ಳತನ ನಡೆಸಿದ ಘಟನೆ ಸಂಭವಿಸಿದೆ.
ಪಾದಬೆಟ್ಟು ನಿವಾಸಿ ಗಣೇಶ್ ಪ್ರಸಾದ್ ಎಂಬವರ ಮನೆಯಲ್ಲಿ ಕಳ್ಳತನ ಪ್ರಕರಣ ನಡೆದಿದೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ಸಾರಾಂಶ : ಪಿರ್ಯಾದಿದಾರರಾದ ಗಣೇಶ್ ಪ್ರಸಾದ್ (43), ಪಾದೆಬೆಟ್ಟು ಗ್ರಾಮ, ಕಾಪು ಇವರು ದಿನಾಂಕ 22/06/2025 ರಂದು ಮದ್ಯಾಹ್ನ 12:45 ಗಂಟೆಗೆ ಮನೆಗೆ ಬೀಗ ಹಾಕಿ ಸಂಸಾರದೊಂದಿಗೆ ಮಂಗಳೂರಿನಲ್ಲಿ ಇರುವ ದೊಡ್ಡಮ್ಮನ ಮನೆಗೆ ಹೋಗಿ ಅಲ್ಲಿ ರಾತ್ರಿ ಊಟ ಮಾಡಿ ವಾಪಾಸು ರಾತ್ರಿ 21:30 ಗಂಟೆಗೆ ಮನೆಗೆ ಬಂದು ನೋಡಲಾಗಿ , ಯಾರೋ ಕಳ್ಳರು ಮನೆಯ ಎದುರಿನ ಬಾಗಿಲಿನ ಚಿಲಕವನ್ನು ಯಾವುದೋ ಆಯುಧದಿಂದ ಬಲಾತ್ಕಾರವಾಗಿ ಮುರಿದು ಒಳಗೆ ಹೊಕ್ಕಿ ಮನೆಯ ಒಳಗೆ ಕಪಾಟಿನ ಬಾಗಿಲನ್ನು ತೆರೆದು ಕಪಾಟಿನಲ್ಲಿ ಇಟ್ಟಿದ್ದ ನಗದು ರೂಪಾಯಿ 1,20,000/- ಹಾಗೂ ಚಿನ್ನದ ಚೈನ್-1 ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2025 ಕಲಂ:331 (1),331 (4),305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.