Home Crime ಹೆಬ್ರಿ : ಕಾಲು ಜಾರಿ ಹೊಳೆಗೆ ಬಿದ್ದು ಯುವಕ ಮೃತ್ಯು..!!

ಹೆಬ್ರಿ : ಕಾಲು ಜಾರಿ ಹೊಳೆಗೆ ಬಿದ್ದು ಯುವಕ ಮೃತ್ಯು..!!

ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿಯ ತಿಂಗಳೆ ಸೀತಾನದಿ ಹೊಳೆಯಲ್ಲಿ ಯುವಕನೋರ್ವ ಕಾಲು ಜಾರಿ ಬಿದ್ದು ಸಾವನಪ್ಪಿದ ಘಟನೆ ನಿನ್ನೆ ನಡೆದಿದೆ.

ಹೆಬ್ರಿ ಕಿನ್ನಿ ಗುಡ್ಡೆ ನಿವಾಸಿ ಸುಧಾಕರ್‌ ಶೆಟ್ಟಿ ಅವರ ಪುತ್ರ ಸಂಕೇತ್‌ ಶೆಟ್ಟಿ (24) ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ.

ಸ್ನೇಹಿತರೊಂದಿಗೆ ನದಿಗೆ ಸ್ಥಾನಕ್ಕೆ ತೆರಳಿದಾಗ ಕಾಲು ಜಾರಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೆಬ್ರಿ ಗ್ರಾ. ಪಂ.ನ ಅಂಗವಿಕಲರ ಪುನರ್‌ವಸತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರು, ಜೆಸಿಐ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು.