ಕಾರ್ಕಳ: ಯುವಕನೊಬ್ಬನಿಗೆ ಟೆಲಿಗ್ರಾಫ್ ಆ್ಯಪ್ ಗೆ ಸೇರುವಂತೆ ಹೇಳಿ, ಸೇರಿದಂತೆ ನಂತರ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.
ವಂಚನೆಗೊಳಾಗದವರು ಸಸಿಹಿತ್ಲು ನಿವಾಸಿ ಅಶ್ವಿತ್ ಎಂದು ತಿಳಿದು ಬಂದಿದೆ.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ವಿವರ : ದಿನಾಂಕ 28/01/2025 ರಂದು ಪಿರ್ಯಾದಿದಾರರಾದ ಅಶ್ವಿತ್ (34) ಸಸಿಹಿತ್ಲು ಅಂಚೆ ಮಂಗಳೂರು ಇವರ ವಾಟ್ಸಾಪ್ ನಂಬ್ರಕ್ಕೆ ಮೀನಾ ಸಕ್ಪಾಲ್ +918433053932 ನಂಬ್ರದಿಂದ ವಾಟ್ಸಾಪ್ ಮೆಸೇಜ್ ಮಾಡಿ ಟೆಲಿಗ್ರಾಫ್ App ನಲ್ಲಿ S-Coin Investemnet task ಗೆ Join ಆಗುವಂತೆ ಹೇಳಿದ್ದು ಅದರಂತೆ ಫಿರ್ಯಾದುದಾರರು ಮೇಲೆ ಕಾಣಸಿದ App ಗೆ Join ಅಗಿ Account Detais ಕಳುಹಿಸಿರು ತ್ತಾರೆ. ಸದ್ರಿ Task ಗೆ ಹೆಚ್ಚಿನ ಹಣ ಹಾಕಿದರೇ ಹೆಚ್ಚು ಹೆಚ್ಚು ಕಮೀಷನ್ ನೀಡುವುದಾಗಿ ನಂಬಿಸಿದ್ದು ಅದರಂತೆ ಫಿರ್ಯಾದುದಾರರ Maharastra Bank Mangalore Branch ನ ಖಾತೆ ಯಿಂದ ದಿನಾಂಕ 29/01/2025 ರಿಂದ ದಿನಾಂಕ 19/06/2025 ರ ಮದ್ಯದ ಅವಧಿಯಲ್ಲಿ S-Coin Investemnet ಗೆ ಸೇರಿದ UPI ನಂಬಕ್ಕೆ ಒಟ್ಟು 15,52,650/- ರೂ ಹಣ ಹಾಕಿದ್ದು, ಆ ಬಳಿಕ ಇನ್ನು ಹೆಚ್ಚಿನ ಹಣ ಹಾಕುವಂತೆ ತಿಳಿಸಿದಾಗ ಹಣ ಇಲ್ಲ ಹಾಕಿದ ಹಣ ವಾಪಾಸು ನೀಡುವಂತೆ ಕೇಳಿದ್ದು ಅದಕ್ಕೆ Tax Payment ಮಾಡಬೇಕು ಎಂದು ತಿಳಿಸಿ ಫಿರ್ಯಾಧುದಾರರು ಕಟ್ಟಿದ ಹಣವನ್ನು ವಾಪಾಸು ನೀಡಿರುವುದಿಲ್ಲಾವಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 97/2025 ಕಲಂ: 66 (D) IT ACT ರಂತೆ ಪ್ರಕರಣ ದಾಖಲಾಗಿರುತ್ತದೆ.
