ಉಡುಪಿ : ತುಳುಕೂಟ ಒಡಿಪು ಮತ್ತು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ವತಿಯಂದ ನಗರದ ಜಗನ್ನಾಥ ಸಭಾಭವನದಲ್ಲಿ ಆಟಿದ ತಿರ್ಲ್ – 2025 ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ತುಳುಸಂಘಗಳ ವಿದ್ಯಾರ್ಥಿಗಳು ತುಳುನಾಡಿನ ವೈವಿಧ್ಯವಯ ಆಹಾರ ತಿನಿಸುಗಳನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ದೆಂದೂರುಕಟ್ಟೆಯ ಹಿರಿಯ ನಾಟಿ ವೈದ್ಯೆ, ದೃಷ್ಠಿ ನಿವಾಳಿಸುವ ತಜ್ಞೆ ಕಮಲಾ ಮಡಿವಾಳ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅವರು ಮಾತನಾಡುತ್ತಾ, ಹಿಂದೆ ನಮ್ಮ ಹಿರಿಯರು ಮಳೆಗಾಲದ ಆಟಿ ತಿಂಗಳಲ್ಲಿ ತಿಂದುಣ್ಣುವುದಕ್ಕೂ ಇಲ್ಲದೇ ಸಂಕಷ್ಟ ಅಭವಿಸುತಿದ್ದರು. ಆದರೇ ಇಂದು ಆ ಪರಿಸ್ಥಿತಿ ಇಲ್ಲ, ನಾವೆಲ್ಲಾ ಸಾಕಷ್ಟು ಸ್ಥಿತಿವಂತರಾಗಿದ್ದೇವೆ. ಹಾಗಂತ ನಮ್ಮ ಹಿರಿಯರ ಕಷ್ಟದ ದಿನಗಳನ್ನು ಮರೆಯಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮನವನ್ನು ಆಯೋಜಿಸಲಾಗಿದೆ ಎಂದರು.
ಹಿಂದೆ ಮಳೆಗಾಲ ಎಂದರೇ ಅನಾರೋಗ್ಯದ ಕಾಲವಾಗಿತ್ತು, ಅದಕ್ಕಾಗಿ ನಮ್ಮ ಹಿರಿಯರು ಪ್ರಕೃತಿಯಲ್ಲಿ ಸಿಕ್ಕುವ ಸೊಪ್ಪು ಗೆಡ್ಡೆಗಳನ್ನು ಬಳಸುತಿದ್ದರು. ಇದು ಆಹಾರವೂ ಔಷಧಿಯೂ ಆಗಿರುತಿತ್ತು. ಇಂತಹ ಪ್ರಕೃತಿದತ್ತ ಆಹಾರವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ ಎಂದರು.
ಕಾಲೇಜುಗಳ ತುಳುಸಂಘದ ಶರಣ್ಯ (ತೆಂಕನಿಡಿಯೂರು ಕಾಲೇಜು), ಶ್ರೇಯಸ್ ಮತ್ತು ಅನಿಶಾ ಭಂಡಾರಿ (ಎಂಎಸ್ಆರ್ಎಸ್ ಶಿರ್ವ), ಕೃತಿ ಮೂಡಬೆಟ್ಟು (ಎಂಜಿಎಂ ಕಾಲೇಜು), ಬಾವನಾ ಮತ್ತು ನಿರಾಲಿ (ವಿದ್ಯೋದಯ ಪಿಯುಸಿ ಉಡುಪಿ), ಅನ್ಯ ಆಚಾರ್ಯ (ತ್ರಿಷಾ ಪಿಯುಸಿ ಉಡುಪಿ) ತಮ್ಮಅಭಿಪ್ರಾಯಗಳನ್ನು ಹಂಚಿಕೊಂಡರು.
ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು ವೇದಿಕೆಯಲ್ಲಿದ್ದರು, ಕಾರ್ಯಕ್ರಮ ಸಂಚಾಲಕಿಯರಾದ ತಾರಾ ಸತೀಶ್ ಸ್ವಾಗತಿಸಿದರು ಮತ್ತು ಪೂರ್ಣಿಮಾ ಶೆಟ್ಟಿ ವಂದಿಸಿದರು, ಜ್ಯೋತಿ ದೇವಾಡಿಗ ಪ್ರಾರ್ಥಿಸಿದರು, ಯಶೋಧಾ ಕೇಶವ್ ಮತ್ತು ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.