Home Crime ಅಜೆಕಾರು : ನಾಯಿಗೆ ವಿಷ ಉಣಿಸಿದ ಪ್ರಕರಣ : ಆರೋಪಿಗಳ ಮಾಹಿತಿ ನೀಡಿದರೆ 50 ಸಾವಿರ...

ಅಜೆಕಾರು : ನಾಯಿಗೆ ವಿಷ ಉಣಿಸಿದ ಪ್ರಕರಣ : ಆರೋಪಿಗಳ ಮಾಹಿತಿ ನೀಡಿದರೆ 50 ಸಾವಿರ ಬಹುಮಾನ…!!

ಅಜೆಕಾರು : ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಣೆಯ ವಿಷ್ಣುಮೂರ್ತಿ ದೇವಸ್ಥಾನ ಪರಿಸರದಲ್ಲಿ ಜೂ. 6ರಂದು ನಾಯಿ ಮೃತಪಟ್ಟ ಸ್ಥಿತಿಯಲ್ಲಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ನಾಯಿಗೆ ವಿಷ ಉಣಿಸಿರುವುದು ದೃಢಪಟ್ಟಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದೀಗ ಪೆಟಾ (ಪೀಪಲ್‌ ಫಾರ್‌ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಎನಿಮಲ್ಸ್‌ – ಪ್ರಾಣಿ ದಯಾ ಸಂಘ) ಸಂಸ್ಥೆ ಆರೋಪಿಗಳ ಸುಳಿವು ಕೊಟ್ಟವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ.

ಅಲ್ಲದೆ ಈ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.