Home Crime ಅಕ್ರಮ ದನಗಳ ಸಾಗಾಟ : ಇಬ್ಬರು ಆರೋಪಿಗಳು ಪರಾರಿ…!!

ಅಕ್ರಮ ದನಗಳ ಸಾಗಾಟ : ಇಬ್ಬರು ಆರೋಪಿಗಳು ಪರಾರಿ…!!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿರುವವಾಗ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರು ಕಾರಿನ ತಪಾಸಣೆ ನಡೆಸುತ್ತಿರುವಾಗ ಇಬ್ಬರು ಆರೋಪಿಗಳು ಕಾರು ಬಿಟ್ಟು ಪರಾರಿಯಾಗಿದ್ದಾರೆ.

ಪ್ರಕರಣ ವಿವರ : ದಿನಾಂಕ 07/07/2025 ರಂದು ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ನವೀನ್‌ ಬೋರ್ಕರ್ (ತನಿಖೆ) ರವರಿಗೆ ಬೆಳಿಗ್ಗೆ ಸಮಯಕ್ಕೆ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಒಂದು ಕೆಂಪು ಬಣ್ಣದ BREZZA ಕಾರಿನಲ್ಲಿ ದನವನ್ನು ಕಳವು ಮಾಡಿ ಕೊಂಡು ಹೋಗುತ್ತಿರುವುದಾಗಿ ಮಾಹಿತಿ ಬಂದಂತೆ ಬೈಂದೂರು ಒತ್ತಿನಣೆಯ ತಿರುವಿನಲ್ಲಿ ಬ್ಯಾರಿಕೇಡ್‌ ಹಾಕಿ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿರುವ ವಾಹನಗಳನ್ನು ಒತ್ತಿಣೆನೆ ತಿರವಿನಲ್ಲಿ ತಪಾಸಣೆ ಮಾಡುತ್ತಿರುವಾಗ ಬೆಳಿಗ್ಗೆ 6:00 ಗಂಟೆ ಸಮಯಕ್ಕೆ ಬೈಂದೂರು ಕಡೆಯಿಂದ ಬಂದ ಒಂದು ಕೆಂಪು ಬಣ್ಣದ KA-47-M-8960 ನಂಬ್ರನ BREZZA ಕಾರನ್ನು ತಡೆದು ನಿಲ್ಲಿಸಿದ್ದು ಕಾರನ್ನು ಹಿಂದಕ್ಕೆ ರಿವರ್ಸ ತೆಗದುಕೊಳ್ಳಲು ಪ್ರಯತ್ನಿಸಿದ್ದು ಹಿಂದುಗಡೆ ವಾಹನ ಇದ್ದುದರಿಂದ ಹಿಂದುಗಡೆ ತೆಗದುಕೊಳ್ಳಲು ಅಗದೆ ಇರುವಾಗ ಕಾರನ್ನು ಅಲ್ಲಿಯೇ ಬಿಟ್ಟು ಕಾರಿನಲ್ಲಿ ಇದ್ದ ಇಬ್ಬರು ವ್ಯಕ್ತಿಗಳು ಕಾರಿನಿಂದ ಇಳಿದು ಓಡಿ ಹೋಗಿರುತ್ತಾರೆ. ಕಾರಿಗೆ ಟಿಂಟ್‌ ಗ್ಲಾಸ್‌ ಅಳವಡಿಸಿದ್ದು ಕಾರಿನ ಡಿಕ್ಕಿಯನ್ನು ಒಪನ್‌ ಮಾಡಿ ನೊಡಿದಾಗ ಯಾವುದೇ ಪರವಾನಿಗೆ ಪಡೆಯದೇ ಕಾರಿನ ಡಿಕ್ಕಿಯಲ್ಲಿ ನಾಲ್ಕು ದನಗಳ ಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಒಂದರ ಮೇಲೆ ಒಂದನ್ನು ಹಾಕಿ ಎಲ್ಲಿಂದಲೋ ಮಾಂಸ ಮಾಡುವ ಉದ್ದೇಶದಿಂದ ಕಳವು ಮಾಡಿಕೊಂಡು ಸಾಗಾಟ ಮಾಡಿರುವುದಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 132/2025 ಕಲಂ: 303(2) BNS 4,5,7,12 karnataka prevention of cow slanghter & cattle prevention Act 2020 Prevention of cruelty to Animals Act 1960, ಕಲಂ: 11,(1)(D) Sec 66 ಜೊತೆಗೆ 192 (A) Imv Act and CMV Rule 100(2) R/w 177 imv Act ರಂತೆ ಪ್ರಕರಣ ದಾಖಲಾಗಿರುತ್ತದೆ.