ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ಕಾಲೇಜೊಂದರ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಘಟನೆ ಸಂಭವಿಸಿದೆ.
ನಾಪತ್ತೆಯಾದ ವಿದ್ಯಾರ್ಥಿ ಸಿದ್ದಾರ್ಥ್ ಕಾರ್ವಾಲ್ ಎಂದು ತಿಳಿಯಲಾಗಿದೆ.
ರಾಜಸ್ಥಾನದ ನಿವಾಸಿ ಜೀತ್ರೇಂದ್ರ ಕುಮಾರ್ ಅವರ ಮಗ ಸಿದ್ದಾರ್ಥ್ ಕಾಲೇಜಿನ ಹಾಸ್ಟೇಲಿನಿಂದ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ವಿವರ : ಪಿರ್ಯಾದಿದಾರರಾದ ಜೀತೇಂದ್ರ ಕುಮಾರ್ (50),ರಾಜಸ್ಥಾನ ಇವರು ದಿನಾಂಕ 07/07/2025 ರಂದು ಬೆಳಿಗ್ಗೆ 08:00 ಗಂಟೆಗೆ ಮಣಿಪಾಲ MSAP ಹಾಸ್ಟೇಲಿನಲ್ಲಿರುವ ಮಗನನ್ನು ನೋಡಲು ಬಂದಾಗ ಪಿರ್ಯಾದಿದಾರರ ಮಗ ಸಿದ್ದಾರ್ಥ ಕಾರ್ವಾಲ್ (23) ಈತನು ಹಾಸ್ಟೇಲಿನ ರೂಮಿನಲ್ಲಿ ಇಲ್ಲದೇ ರೂಮಿನಲ್ಲಿ ಬಟ್ಟೆ ಹಾಗೂ ಮೊಬೈಲ್ ಇದ್ದು ನಂತರ Care Taker Block 10 ಕೌಂಟರಿಗೆ ಹೋಗಿ ವಿಚಾರಿಸಲಾಗಿ ಪಿರ್ಯಾದಿದಾರರ ಮಗ ದಿನಾಂಕ 06/07/2025 ರಂದು ರಾತ್ರಿ 10:30 ಗಂಟೆಗೆ ಹೋಗಿರುವುದಾಗಿ ತಿಳಿಸಿರುತ್ತಾರೆ ಪಿರ್ಯಾದಿದಾರರ ಮಗ ಹಾಸ್ಟೇಲಿಗೆ ಬರದೇ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 124/2025 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.