ಉಡುಪಿ : ಬ್ರಹ್ಮಾವರ ತಾಲೂಕಿನ ಕುಂಜಾಲು ಸಮೀಪ ದನದ ರುಂಡ ಹಾಗೂ ಕಾಲು ಕಡಿದು ಎಸೆದು ಸಮಾಜದ ಶಾಂತಿ ಕದಡಿ ಕೋಮು ಪ್ರಚೋದನೆ ನೀಡಲು ಪ್ರಯತ್ನ ಮಾಡುತ್ತಿರುವವರನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಯವರು ಪತ್ತೆ ಹಚ್ಚಿ ಶೀಘ್ರ ಬಂಧನ ಮಾಡಬೇಕೆಂದು ನವೀನ್ ಸಾಲ್ಯಾನ್ ಆಗ್ರಹಿಸಿದ್ದಾರೆ.
ನಿನ್ನೆ ರಾತ್ರಿ ಈ ದುಷ್ಕೃತ್ಯ ಎಸಗಿದ್ದು ಆರೋಪಿಗಳು ಯಾರೇ ಆಗಿದ್ದರು ಪೊಲೀಸ್ ಇಲಾಖೆ ಆ ಪರಿಸರದಲ್ಲಿರುವ ಸಿಸಿ ಟಿವಿ ಪರಿಶೀಲನೆ ಅಥವಾ ಇನ್ಯಾರೋ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಕೂಡಲೇ ಬಂಧಿಸಿ ವಿಚಾರಣೆ ನಡೆಸಿ ಇದರ ಹಿಂದೆ ಇರುವ ದುಷ್ಕೃತ್ಯ ಹಾಗೂ ದುಷ್ಕರ್ಮಿಗಳನ್ನು ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ನವೀನ್ ಸಾಲ್ಯಾನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.