Home Crime ಕಾರ್ಕಳ : ವ್ಯಕ್ತಿಯೊಬ್ಬರ ತೋಟದಲ್ಲಿ ಶ್ರೀಗಂಧದ ಮರಗಳು ಕಳವು…!!

ಕಾರ್ಕಳ : ವ್ಯಕ್ತಿಯೊಬ್ಬರ ತೋಟದಲ್ಲಿ ಶ್ರೀಗಂಧದ ಮರಗಳು ಕಳವು…!!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ  ವ್ಯಕ್ತಿಯೊಬ್ಬರ ಜಾಗದ ತೋಟದಲ್ಲಿ ಶ್ರೀಗಂಧದ ಮರಗಳು ಕಳ್ಳತನವಾದ ಘಟನೆ ನಡೆದಿದೆ.

ನಿಟ್ಟೆ ನಿವಾಸಿ ದಿನೇಶ್ ಎಂಬವರ ಜಾಗದಲ್ಲಿ ಶ್ರೀಗಂಧದ ಮರಗಳನ್ನು ಕಳ್ಳರು ಕಳ್ಳತನ ನಡೆಸಿದ್ದಾರೆ.

ಪ್ರಕರಣದ ಸಾರಾಂಶ : ಪಿರ್ಯಾದುದಾರ ಶ್ರೀ ದಿನೇಶ್(54) ನಿಟ್ಟೆಅಂಚೆ ಮತ್ತು ಗ್ರಾಮ. ಇವರು 16 ವರ್ಷದ ಹಿಂದೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಹೇನೊಟ್ಟು ಎಂಬಲ್ಲಿ ತಮ್ಮ ಜಾಗದಲ್ಲಿ 225 ಶ್ರೀಗಂಧದ ಸಸಿಗಳನ್ನು ನೆಟ್ಟಿದ್ದು, ದಿನಾಂಕ 16/06/2025 ರಂದು ಬೆಳಿಗ್ಗೆ 08:30 ಗಂಟೆಗೆ ತೋಟಕ್ಕೆ ಹೋದಾಗ ಎಲ್ಲಾ ಶ್ರೀಗಂಧದ ಮರಗಳು ಇದ್ದು ಮರುದಿನ ದಿನಾಂಕ 17/06/2025 ರಂದು ಬೆಳಿಗ್ಗೆ ತೋಟಕ್ಕೆ ಹೋದಾಗ 9 ಮರಗಳನ್ನು ಕತ್ತರಿಸಿದ್ದು ಯಾರೋ ಕಳ್ಳರು ತೋಟದಲ್ಲಿದ್ದ 9 ಶ್ರೀಗಂಧದ ಮರಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಮರಗಳ ಮೌಲ್ಯ ರೂ 4,00,000 ಅಗಿರುತ್ತದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 84/2025 ಕಲಂ 329(3), 303(2) ಭಾರತೀಯ ನ್ಯಾಯ ಸಂಹಿತೆ 2023 ಕಲಂ 86,87 ಕರ್ನಾಟಕ ಅರಣ್ಯ ಕಾಯ್ದೆ1963 ರಂತೆ ಪ್ರಕರಣ ದಾಖಲಾಗಿರುತ್ತದೆ.