ಬೆಳ್ಮಣ್: ಮುಂಡ್ಕೂರು ಗ್ರಾಮದ ಸಚ್ಚೇರಿ ಗಾಂದಡ್ಪು ಶ್ರೀ ಮಹಾದೇವಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ, ಸುಶಾಂತ್ ಸಚ್ಚೇರಿಪೇಟೆ ಇವರ ಸಾಹಿತ್ಯದಲ್ಲಿ, ಕೆ ಪಿ ಮಿಲನ್ ಇವರ ಗಾಯನದಲ್ಲಿ, ಸಂತೋಷ್ ಪುಚ್ಚೇರ್ ಇವರ ಧ್ವನಿಮುದ್ರಣದಲ್ಲಿ, ಶರತ್ ಶೆಟ್ಟಿ ಸಚ್ಚೇರಿಪೇಟೆ ಇವರ ಸಾರಥ್ಯದಲ್ಲಿ ನಿರ್ಮಾಣಗೊಂಡ ‘ಗಾಂದಡ್ಪುದ ಅಪ್ಪೆಗ್ ಗಾನಾರ್ಚನೆ’ ಎಂಬ ಧ್ವನಿಸುರುಳಿ ಬಿಡುಗಡೆ ಶುಕ್ರವಾರ ಕ್ಷೇತ್ರದಲ್ಲಿ ನಡೆಯಿತು.
ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರ ಭಟ್ ಹಾಗೂ ಕ್ಷೇತ್ರದ ದೇವಿ ಪಾತ್ರಿ ಶ್ರೀ ಕೇಶವ ಅಂಚನ್ರವರು ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮುಂಡ್ಕೂರು ಪೊಸ್ರಾಲು ಬಿಲ್ಲವ ಸಂಘದ ಗೌರವಾಧ್ಯಕ್ಷ ಶ್ರೀಧರ ಸನಿಲ್, ಪುರುಷೋತ್ತಮ ಪೂಜಾರಿ, ಸೋಮನಾಥ ಪೂಜಾರಿ, ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಲತೀಶ್ ಪೂಜಾರಿ, ಧೀರಜ್ ಪೂಜಾರಿ, ಸಂತೋಷ್ ಅಂಚನ್, ಶರತ್ ಶೆಟ್ಟಿ ಸಚ್ಚೇರಿಪೇಟೆ, ಸುರೇಶ್ ಪೂಜಾರಿ, ನಿರಂಜನ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.





