Home Crime ಹಿರಿಯಡ್ಕ : ಜನರಲ್‌ ಸ್ಟೋರ್‌ನಲ್ಲಿ ಉಚಿತ ಅನ್ನ ಭಾಗ್ಯ ಅಕ್ಕಿ ದಾಸ್ತಾನು : ಪೊಲೀಸರಿಂದ ದಾಳಿ…!!

ಹಿರಿಯಡ್ಕ : ಜನರಲ್‌ ಸ್ಟೋರ್‌ನಲ್ಲಿ ಉಚಿತ ಅನ್ನ ಭಾಗ್ಯ ಅಕ್ಕಿ ದಾಸ್ತಾನು : ಪೊಲೀಸರಿಂದ ದಾಳಿ…!!

ಹಿರಿಯಡ್ಕ: ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ಜನರಲ್ ಸ್ಟೋರ್ ಒಂದರಲ್ಲಿ ಉಚಿತ ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ದಾಸ್ತಾನು ಇಟ್ಟಿರುವ ಬಗ್ಗೆ ಸಿಕ್ಕಿದ್ದ ಮಾಹಿತಿಯಂತೆ ಹಿರಿಯಡ್ಕ ಪೊಲೀಸರು ದಾಳಿ ನಡೆಸಿದ್ದಾರೆ.

ಮಾಂಬೆಟ್ಟು ಎಂಬಲ್ಲಿ ಪ್ರಭು ಜ‌ರನರ್ ಸ್ಟೋರ್ ಗೆ ದಾಳಿ ನಡೆಸಿ ದಾಸ್ತಾನು ಮಾಡಿದ ಅಕ್ಕಿಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ: ದಿನಾಂಕ 10/06/2025 ರಂದು ಹಿರಿಯಡಕ ಠಾಣಾ ವ್ಯಾಪ್ತಿಯ ಬೊಮ್ಮರಬೆಟ್ಟು ಗ್ರಾಮದ ಮಾಂಬೆಟ್ಟು ಎಂಬಲ್ಲಿ ಪ್ರಭು ಜನರಲ್‌ ಸ್ಟೋರ್‌ನಲ್ಲಿ ಸರಕಾರದ ಉಚಿತ ಅನ್ನ ಬಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ದಾಸ್ತಾನು ಇಟ್ಟಿರುವ ಬಗ್ಗೆ ಸಿಕ್ಕಿದ್ದ ಮಾಹಿತಿಯಂತೆ ಆಹಾರ ನಿರೀಕ್ಷಕರು ಉಡುಪಿ ಮತ್ತು ಹಿರಿಯಡಕ ಠಾಣಾ ಪಿ.ಎಸ್.ಐ ಪುನಿತ್‌ ಕುಮಾರ್‌ ಬಿ.ಇ ಹಾಗೂ ಸಿಬ್ಬಂಧಿಗಳಾದ ಆದರ್ಶ ಪಿ.ಸಿ, ಕಾರ್ತಿಕ್‌ ಪಿ.ಸಿ ರವರೊಂದಿಗೆ ಸ್ಥಳಕ್ಕೆ ದಾಳಿ ಮಾಡಿ, ಪ್ರಭು ಜನರಲ್‌ ಸ್ಟೋರ್‌ ಸಿಟೌಟ್‌ನಲ್ಲಿ ಒಟ್ಟು 131 ಪ್ಲಾಸ್ಟೀಕ್‌ ಚೀಲಗಳಲ್ಲಿ 1,27,880/ರೂಪಾಯಿ ಮೌಲ್ಯದ ಒಟ್ಟು 55 ಕ್ವಿಂಟಾಲ್‌ 60 KG ಅಕ್ಕಿ ದಾಸ್ತಾನು ಮಾಡಿಟ್ಟಿರುವುದನ್ನು ಪರಿಶೀಲಿಸಲಾಗಿ ಅನ್ನಭಾಗ್ಯ ಯೋಜನೆಯಡಿಯಲ್ಲಿ ವಿತರಿಸಲಾಗಿರುವ ಅಕ್ಕಿ ಎಂದು ದೃಢಪಟ್ಟಿರುತ್ತದೆ.

ಸದರಿ ಅಕ್ಕಿಯನ್ನು ಆಹಾರ ನಿರೀಕ್ಷಕರ ಸಮಕ್ಷಮ ಸ್ವಾಧೀನಪಡಿಸಿಕೊಂಡು ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 43/2025 ಕಲಂ: 3 & 7 ಅಗತ್ಯ ವಸ್ತು ಅಧಿನಿಯಮ 1955 ರಂತೆ ಪ್ರಕರಣ ದಾಖಲಿಸಿ ಕೊಂಡು ವಾಸುದೇವ ಪ್ರಭು(56), ತಂದೆ: ಕೇಶವ ಪ್ರಭು, ಕುಕ್ಕದಕಟ್ಟೆ,ಮಾಂಬೆಟ್ಟು ಬೊಮ್ಮರಬೆಟ್ಟು ಗ್ರಾಮ, ಉಡುಪಿ ತಾಲೂಕು ಎಂಬಾತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.