Home Crime ಬೈಂದೂರು : ಗೋಡೌನ್ ನಲ್ಲಿ 200 ಚೀಲ ಅಡಿಕೆ ಕಳವು…!!

ಬೈಂದೂರು : ಗೋಡೌನ್ ನಲ್ಲಿ 200 ಚೀಲ ಅಡಿಕೆ ಕಳವು…!!

ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಗೋಡೌನ್ ನಲ್ಲಿ ಇಟ್ಟಿದ್ದ 200 ಚೀಲ ಸಿಪ್ಪೆ ಅಡಿಕೆಯನ್ನು ಕಳ್ಳರು ಕಳವುಗೈದ ಘಟನೆ ನಡೆದಿದೆ.

ಮಸೂದ್ ಪಟೇಲ್ ಎಂಬವರು ತನ್ನ ಗೋಡೌನ್ ನಲ್ಲಿ ಕಳವು ಪ್ರಕರಣ ಸಂಭವಿಸಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆ ವಿವರ: ಪಿರ್ಯಾದಿದಾರರಾದ ಮಸೂದ್ ಪಟೇಲ್ (74), ಭಟ್ಕಳ ಇವರು ಬೈಂದೂರು ತಾಲೂಕು ಯಡ್ತರೆ ಗ್ರಾಮದ ಹಡಿನಗದ್ದೆ ಎಂಬಲ್ಲಿ 60 ಎಕ್ರೆ ಸ್ಥಳದಲ್ಲಿ ಅಡಿಕೆ, ತೆಂಗು , ಹಲಸು ,ಮಾವು ರಬ್ಬರ್ ಇತರ ಬೇರೆ ಬೇರೆ ಕೃಷಿ ಮಾಡಿ ಕೊಂಡಿರುತ್ತಾರೆ. ಕೃಷಿ ತೋಟ ಮತ್ತು ಗೋಡೌನ್ ನೋಡಿಕೊಳ್ಳಲು ಕಡಬ ತಾಲೂಕಿನ ನೂಜಿ ಬಾಳತೀಲಾ ಸಂತೋಷ್ ಇರುತ್ತಾರೆ. ಪಿರ್ಯಾದಿದಾರರು ತೋಟದಲ್ಲಿ ಅದ ಈ ವರ್ಷದ ಸುಮಾರು 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆಯನ್ನು ಪ್ಯಾಸ್ಟಿಕ್ ಚೀಲದಲ್ಲಿ ಹಾಕಿ ಚೀಲ ಮಾಡಿ ಗೋಡೌನ್ ನಲ್ಲಿ ಇಟ್ಟು ಕಪ್ಪು ಬಣ್ಣದ ಪ್ಯಾಸ್ಟಿಕ್ ಮುಚ್ಚಿ ಇಟ್ಟಿರುತ್ತಾರೆ.ಕೃಷಿ ತೋಟ ಮತ್ತು ಗೋಡೌನ್ ನೋಡಿ ಕೊಳ್ಳವ ಸಂತೋಷ್ ದಿನಾಂಕ 15/05/2025 ರಂದು ತನ್ನ ಊರಾದ ಕಡಬಕ್ಕೆ ಹೋಗಿರುತ್ತಾನೆ. ಪಿರ್ಯಾದುದಾರರು ದಿನಾಂಕ 22/05/2025 ರಂದು ಬೆಳಿಗ್ಗೆ 10:00 ಗಂಟೆಗೆ ತೋಟದ ಗೋಡೌನ್ ಹೋಗಿ ನೋಡಿದಾಗ ಗೋಡೌನ ಎದುರಿನ ಕಬ್ಬಿಣದ ಡ್ರಿಲ್ ನ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದಿರುವುದು ಕಂಡು ಬಂದಿದ್ದು ಗೋಡೌನ್ ಲ್ಲಿ ಇದ್ದ 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆಯನ್ನು ಪ್ಯಾಸ್ಟಿಕ್ ಚೀಲ ಹಾಕಿ ಕಟ್ಟಿ ಇಟ್ಟಿರುವುದನ್ನು ದಿನಾಂಕ 15/05/2025 ರಿಂದ ದಿನಾಂಕ 22/05/2025 ರಂದು ಬೆಳಿಗ್ಗೆ 10:00 ಗಂಟೆಯ ಮಧ್ಯಾವದಿಯಲ್ಲಿ ಯಾರೋ ಕಳ್ಳರು ಗೋಡೌನ್‌ ಬೀಗ ಮುರಿದು ಕಳವು ಮಾಡಿ ಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 106/2025 ಕಲಂ: 331(3), 331(4), 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.