Home Karavali Karnataka ಕಾರ್ಕಳ ಎಎಸ್ಪಿ ಹರ್ಷಾ ಪ್ರಿಯಂವದಾ ವರ್ಗಾವಣೆ…!!

ಕಾರ್ಕಳ ಎಎಸ್ಪಿ ಹರ್ಷಾ ಪ್ರಿಯಂವದಾ ವರ್ಗಾವಣೆ…!!

ಉಡುಪಿ ಜಿಲ್ಲೆ ಕಾರ್ಕಳದ ಖಡಕ್ ಪೊಲೀಸ್ ಅಧಿಕಾರಿ ಹರ್ಷಾ ಪ್ರಿಯಂವದಾ ವರ್ಗಾವಣೆಯಾಗಿದ್ದು, ಸಿಐಡಿ ಎಸ್ಪಿ ಆಗಿ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಾರ್ಕಳದ ಎ ಎಸ್ಪಿಯಾಗಿ, ಉಡುಪಿ ಸೆನ್ ಠಾಣೆಯ ಉಸ್ತುವಾರಿ ಜವಾಬ್ದಾರಿಯನ್ನು ಹೊಂದಿದ್ದ ಅವರು, ಖಡಕ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದವರು.

ಕಾರ್ಕಳದ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಕಠಿಣ ಕ್ರಮಗಳ ಮೂಲಕ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದರು.