Home Karavali Karnataka ಕರ್ನಾಟಕ ರಾಜ್ಯ ದಂತ ಸಮ್ಮೇಳನದಲ್ಲಿ ಆರು ಗೌರವ ಪ್ರಶಸ್ತಿಗಳನ್ನು ಪಡೆದ ಐಡಿಎ ಉಡುಪಿ ಶಾಖೆ…!!

ಕರ್ನಾಟಕ ರಾಜ್ಯ ದಂತ ಸಮ್ಮೇಳನದಲ್ಲಿ ಆರು ಗೌರವ ಪ್ರಶಸ್ತಿಗಳನ್ನು ಪಡೆದ ಐಡಿಎ ಉಡುಪಿ ಶಾಖೆ…!!

Udupi : ಇಂಡಿಯನ್ ಡೆಂಟಲ್ ಅಸೋಸಿಯೇಶನ್ (ಐಡಿಎ) ಉಡುಪಿ ಶಾಖೆ, 51ನೇ ಐಡಿಎ ಕರ್ನಾಟಕ ರಾಜ್ಯ ದಂತ ಸಮ್ಮೇಳನ 2025ರಲ್ಲಿ ಆರು ಪ್ರಮುಖ ಪ್ರಶಸ್ತಿಗಳನ್ನು ಪಡೆದಿದೆ. ಈ ಸಮ್ಮೇಳನವು ಅಜ್ಜಿ ಓಷನ್, ಕಾರವಾರದಲ್ಲಿ ನಡೆಯಿತು.

ಉಡುಪಿ ಶಾಖೆಗೆ ನೀಡಲಾದ ಪ್ರಶಸ್ತಿಗಳು:​ ಶ್ರೇಷ್ಠ ಶಾಖಾ ಅಧ್ಯಕ್ಷ ಪ್ರಶಸ್ತಿ – 100 ಕ್ಕಿಂತ ಹೆಚ್ಚು ಸದಸ್ಯ ರಿರುವ ಶಾಖೆ​, ಶ್ರೇಷ್ಠ ಶಾಖಾ ಕಾರ್ಯದರ್ಶಿ ಪ್ರಶಸ್ತಿ – 100 ಕ್ಕಿಂತ ಹೆಚ್ಚು ಸದಸ್ಯರಿರುವ ಶಾಖೆ​, ಶ್ರೇಷ್ಠ ಸದಸ್ಯತ್ವ ವೃದ್ಧಿ ಪ್ರಶಸ್ತಿ – ಡಾ. ಯು. ಎಸ್. ಮೋಹಂದಾಸ್ ನಾಯಕ್ ಪ್ರಶಸ್ತಿ​, ಶ್ರೇಷ್ಠ ಶಾಖಾ ವಾರ್ತಾಪತ್ರಿಕೆ/ಬುಲೆಟಿನ್ – ಡಾ. ಬಿ. ಟಿ. ಹೆಗ್ಡೆ ಪ್ರಶಸ್ತಿ​, ಶ್ರೇಷ್ಠ ಸಿಡಿಇ ಚಟುವಟಿಕೆ -ಡಾ. ವಿ. ವಿ. ಸುಬ್ಬರೆಡ್ಡಿ ಪ್ರಶಸ್ತಿ​, ಶ್ರೇಷ್ಠ ಆಲ್‌ ರೌಂಡ್ ಚಟುವಟಿಕೆ – ಡಾ. ಬಿ. ಟಿ. ಹೆಗ್ಡೆ ರೋಲಿಂಗ್ ಟ್ರೋಫಿ (100 ಕ್ಕಿಂತ ಹೆಚ್ಚು ಸದಸ್ಯರಿರುವ ಶಾಖೆ)​,

ಈ ಪ್ರಶಸ್ತಿ ಪ್ರದಾನ ಸಮಾರಂಭ​ದಲ್ಲಿ ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಖಾತೆಯ ಮಾನ್ಯ ಸಚಿವ​ ಡಾ. ಎಂ. ಸಿ. ಸುಧಾಕರ್ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭಾರತ್ ಶೆಟ್ಟಿ ​ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಐಡಿಎ ಕರ್ನಾಟಕ ರಾಜ್ಯ ಕಾರ್ಯಕಾರಿ ಸದಸ್ಯ ಡಾ. ಶಿವಶರಣ ಶೆಟ್ಟಿ (ಅಧ್ಯಕ್ಷರು), ಡಾ. ಮಹೇಶ್ ಚಂದ್ರ ಕೆ (ಮಾನ್ಯ ಕಾರ್ಯದರ್ಶಿ) ಮತ್ತು ಡಾ. ಸಂಜಯ್ ಕುಮಾರ್ ಡಿ (ಖಜಾಂಚಿ) ಹಾಗೂ ಆಯೋಜನಾ ಸಮಿತಿಯ ಸದಸ್ಯರು – ಡಾ. ಶುಭನ್‌ ಅಳ್ವ (ಸಮ್ಮೇಳನ ಕಾರ್ಯದರ್ಶಿ), ಡಾ. ಸೂರಜ್ ಹೆಗ್ಡೆ (ಆಯೋಜನಾ ಅಧ್ಯಕ್ಷ) ಮತ್ತು ಡಾ. ರಾಮಚಂದ್ರ ಮಲ್ಲನ್ (ಆಯೋಜನಾ ಕಾರ್ಯದರ್ಶಿ) ಅವರ ಉಪಸ್ಥಿತರಿದ್ದರು.