Home Karavali Karnataka ಉಡುಪಿ : ರೈತರಿಗೆ ಅಕ್ಕಿ ಮಿಲ್ಗಳಿಂದ ವಂಚನೆ ಆರೋಪ…!!

ಉಡುಪಿ : ರೈತರಿಗೆ ಅಕ್ಕಿ ಮಿಲ್ಗಳಿಂದ ವಂಚನೆ ಆರೋಪ…!!

ಉಡುಪಿ: ಜಿಲ್ಲೆಯ ಅಕ್ಕಿ ಮಿಲ್​ಗಳಲ್ಲಿ ಭತ್ತ ನೀಡುವ ರೈತರು ಹಣದ ಬದಲಿಗೆ ಅಕ್ಕಿ ನೀಡುವಂತೆ ಕೋರಿದರೆ ಕಳಪೆ ಗುಣಮಟ್ಟದ ಅಕ್ಕಿಯನ್ನು ನೀಡಿ ವಂಚಿಸಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್​ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಭತ್ತವನ್ನು ಅಕ್ಕಿಮಿಲ್​ನವರಿಗೆ ಮಾರಾಟ ಮಾಡುವಾಗ ಮಿಲ್​ನವರು ಭತ್ತಕ್ಕೆ ದರ ನಿಗದಿ ಮಾಡುತ್ತಾರೆ. ಹಣದ ಬದಲು ಅಕ್ಕಿಯನ್ನೇ ಹಿಂತಿರುಗಿಸುವಂತೆ ಕೋರಿದಾಗ ಮಿಲ್​ನವರು ರೈತ ನೀಡಿದ ಭತ್ತದ ಅಕ್ಕಿ ಬದಲಿಗೆ ಯಾವುದೋ ಕಳಪೆ ಗುಣಮಟ್ಟದ ಅಕ್ಕಿಯನ್ನು ಹೆಚ್ಚಿನ ದರ ನಿಗದಿ ಮಾಡಿ ವಾಪಾಸು ನೀಡುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ. ಈ ಸಮಸ್ಯೆ ಬಗ್ಗೆ ಕಾರ್ಕಳ ಭಾಗದ ರೈತರು ಪಕ್ಷದ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಕೆಲವು ಮಿಲ್​ ಗಳಲ್ಲಿ ಮೋಸ ನಡೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದರು.

ಈ ಬಗ್ಗೆ ರೈತರು ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮವಾಗಿಲ್ಲ. ಜಿಲ್ಲೆಯಲ್ಲಿ ಈಗ ಭತ್ತ ಕಟಾವಿಗೆ ಬರುತ್ತಿದ್ದು, ಅಧಿಕಾರಿಗಳು ತಕ್ಷಣದಿಂದಲೇ ಕ್ರಮಕ್ಕೆ ಮುಂದಾಗಬೇಕು. ರೈತರಿಗೆ ಉಂಟಾಗುತ್ತಿರುವ ನಷ್ಟವನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ರಾಜೇಶ್​ ಕೆ.ವಿ., ನಿರುಪಾದಿ ಗೋಮರ್ಸಿ, ಸಂತೋಷ್​, ರವಿ ಕುಮಾರ್​, ಆರತಿ, ಸಖೀರ್​, ಶ್ರೀನಿವಾಸ, ಸದಾಶಿವ ಉಪಸ್ಥಿತರಿದ್ದರು.