ಶಿರ್ವ: ಉಡುಪಿ ಜಿಲ್ಲೆಯ ಶಿರ್ವ ಸಮೀಪ ವ್ಯಕ್ತಿಯೋರ್ವರು ಇಲಾಖೆಯ ಪರವಾನಿಗೆ ಇಲ್ಲದೇ ಅಕ್ರಮವಾಗಿ ಲ್ಯಾಟ್ರೈಟ್ ಕಲ್ಲುಗಳ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡದೇ ಲ್ಯಾಟ್ರೈಟ್ ಕಲ್ಲುಗಳನ್ನು ಕಳ್ಳತನ ಮಾಡಿ ಟೆಂಪೋದಲ್ಲಿ ಸಾಗಾಟ ಮಾಡುತ್ತಿರುವಾಗ ಪೊಲೀಸರು ವಶಪಡಿಸಿಕೊಂಡಿದ್ದಾರೆ..
ನಾಗೇಶ್ ಆಚಾರ್ಯ ಎಂಬವರ ವಿರುದ್ಧ ಲ್ಯಾಟ್ ರೈಟ್ ಕಲ್ಲು ಕಳ್ಳತನ ಹಾಗೂ ಸಾಗಾಟ ಪ್ರಕರಣ ದಾಖಲಾಗಿದೆ. ಪೊಲೀಸರು ಕಲ್ಲು ಸಹಿತ ಟೆಂಪೋ ವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ : ದಿನಾಂಕ 27/10/2025 ರಂದು ಲೋಹಿತ್ ಕುಮಾರ್ ಸಿ ಎಸ್, ಪೊಲೀಸ್ ಉಪ ನಿರೀಕ್ಷಕರು (ತನಿಖೆ), ಶಿರ್ವ ಪೊಲೀಸ್ ಠಾಣೆ ಇವರಿಗೆ ಕಾಪು ತಾಲೂಕು ಬೆಳ್ಳೆ ಗ್ರಾಮದ ಕುಂತಳನಗರ ಮೋಕ್ಷಗಿರಿ ಎಂಬಲ್ಲಿ ನಾಗೇಶ ಆಚಾರ್ಯ ಎಂಬುವವರು ಇಲಾಖೆಯ ಪರವಾನಿಗೆ ಇಲ್ಲದೇ ಅಕ್ರಮವಾಗಿ ಲ್ಯಾಟ್ರೈಟ್ ಕಲ್ಲುಗಳ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡದೇ ಲ್ಯಾಟ್ರೈಟ್ ಕಲ್ಲುಗಳನ್ನು ಕಳ್ಳತನ ಮಾಡಿ KA-20-AB-2901 ನೇ ನೊಂದಣಿ ಸಂಖ್ಯೆಯ ಟೆಂಪೋದಲ್ಲಿ ಸಾಗಾಟ ಮಾಡಿ ಮಾರಾಟ ಮಾಡುತ್ತಿರುವುದು ಕಂಡು ಬಂದಿರುವುದಾಗಿದೆ.
ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 72/2025 ಕಲಂ: 303(2) BNS, ಕಲಂ: 4, 4A, 21 MMDR ACT ರಂತೆ ಪ್ರಕರಣ ದಾಖಲಾಗಿರುತ್ತದೆ



