Home Crime ಬೈಂದೂರು : ಕಾಲ್ತೋಡು ಗ್ರಾಮದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ : ಪ್ರಕರಣ ದಾಖಲು…!!

ಬೈಂದೂರು : ಕಾಲ್ತೋಡು ಗ್ರಾಮದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ : ಪ್ರಕರಣ ದಾಖಲು…!!

ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ಠಾಣಾ ವ್ಯಾಪ್ತಿಯ ಕಾಲ್ತೋಡು ಗ್ರಾಮದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ಪ್ರಕರಣ ಪತ್ತೆಯಾಗಿದೆ.

ಅಕ್ಟೋಬರ್ 11ರಂದು ಕಾಲ್ತೋಡು ಗ್ರಾಮದ ಕಪ್ಪಡಿ ಪ್ರದೇಶದ ಸರ್ಕಾರಿ ಜಾಗದಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ, ಬೈಂದೂರು ಠಾಣೆಯ ಪಿಎಸ್ಐ ತಿಮ್ಮೇಶ ಬಿ.ಎನ್. ನೇತೃತ್ವದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದರು.

ಅಲ್ಲಿ ವಿಜಯ ಶೆಟ್ಟಿ ಎಂಬಾತ ಯಾವುದೇ ಪರವಾನಿಗೆಯಿಲ್ಲದೇ ಅಕ್ರಮವಾಗಿ ಕೆಂಪುಕಲ್ಲು ತೆಗೆಯುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಸುಮಾರು 40 ಅಡಿ ಉದ್ದ, 40 ಅಡಿ ಅಗಲ ಮತ್ತು 8 ಅಡಿ ಆಳದ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದ್ದು, 200ಕ್ಕೂ ಹೆಚ್ಚು ಕೆಂಪುಕಲ್ಲುಗಳು ರಾಶಿಯಾಗಿ ಪತ್ತೆಯಾಗಿವೆ.

ಸ್ಥಳದಿಂದ ಕವಿ ಪವರ್ ಟಿಲ್ಲರ್ ಡೀಸೆಲ್ ಎಂಜಿನ್ ಯಂತ್ರ, ಕಲ್ಲು ಕಟಿಂಗ್ ಟಿಲ್ಲರ್ ಹಾಗೂ ಸುಮಾರು 200 ಕೆಂಪುಕಲ್ಲು ಸೇರಿ ಒಟ್ಟು ರೂ.1,30,500 ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ವಿಜಯ ಶೆಟ್ಟಿ ಅಕ್ರಮ ಸಂಪಾದನೆಗಾಗಿ ಈ ಗಣಿಗಾರಿಕೆ ನಡೆಸುತ್ತಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.