ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಟಿಪ್ಪರ್ ನಲ್ಲಿ ಅಕ್ರಮವಾಗಿ ಜಲ್ಲಿಕಲ್ಲ ನ್ನು ಸಾಗಿಸುತ್ತಿರುವಾಗ ಪೊಲೀಸರು ಚಾಲಕ ಸಹಿತ ಟಿಪ್ಪರ್ ಹಾಗೂ ಜಲ್ಲಿಕಲ್ಲ ನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ : ದಿನಾಂಕ: 10.10.2025 ರಂದು ಪಿರ್ಯಾದಿದಾರ ಅಶೋಕ ಮಾಳಾಬಗಿ ಪೊಲೀಸ್ ಉಪನಿರೀಕ್ಷಕರು ಬ್ರಹ್ಮಾವರ ಪೊಲೀಸ್ ಠಾಣೆ ಇವರು ಠಾಣಾ ಸರಹದ್ದಿನ ವಾರಂಬಳ್ಳಿ ಗ್ರಾಮದ ಆಕಾಶವಾಣಿ ಜಂಕ್ಷನ್ ಬಳಿ ಠಾಣಾ ಸಿಬ್ಬಂದಿಯವರೊಂದಿಗೆ ವಾಹನ ತಪಾಸಣಾ ಕರ್ತವ್ಯದಲ್ಲಿರುವಾಗ 17:45 ಗಂಟೆಗೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ KA 47 7766 ನೇ ಟಿಪ್ಪರ್ ವಾಹನವನ್ನು ನಿಲ್ಲಿಸಿ ಪರಿಶೀಲಿಸಲಾಗಿ ಚಾಲಕ ವಾಹನದಿಂದ ಇಳಿದು ಬಂದಾಗ ಆತನ್ನಲ್ಲಿ ಹೆಸರು ವಿಳಾಸ ವಿಚಾರಿಸಿದಾಗ ತಾನು ಮೋಹನ ಎಸ್ ಶೆಟ್ಟಿ, ಪ್ರಾಯ:52 ವರ್ಷ,ತಂದೆ: ಶೇಷಗಿರಿ ಶೆಟ್ಟಿ, ವಾಸ: ಬಸ್ತಿ, ಕಾಯ್ಕಿಣಿ, ಉತ್ತರ ಕೊಪ್ಪ ರಸ್ತೆ, ಮುರುಡೇಶ್ವರ, ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ ಎಂದು ತಿಳಿಸಿರುತ್ತಾನೆ. ಪಿರ್ಯಾದಿದಾರರು ಚಾಲಕನ್ನಲ್ಲಿ ವಾಹನದಲ್ಲಿ ಏನು ಲೋಡ್ ಇದೆ ಎಂದು ಕೇಳಿದಾಗ ಜಲ್ಲಿಕಲ್ಲ ಲೋಡ್ ಇರುವುದಾಗಿ ತಿಳಿಸಿರುತ್ತಾನೆ. ಸದ್ರಿ ಜಲ್ಲಿಕಲ್ಲ ನ್ನು ಸಾಗಾಟ ಮಾಡಲು ಪರವಾನಿಗೆ ಇದೆಯೇ? ಎಂದು ಕೇಳಿದಾಗ ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ತಾನು ಕಾರ್ಕಳದ ಬೆಳ್ಮಣ್ ಕ್ರಷರ್ ಕೋರೆಯಿಂದ ಲೋಡ್ ಮಾಡಿಕೊಂಡು ಬೈಂದೂರು ಕಡೆಗೆ ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ. ಸದ್ರಿ ಟಿಪ್ಪರ್ ವಾಹನದ ಹಿಂಬದಿಯ ಬಾಡಿಯಲ್ಲಿ ಸುಮಾರು 3 ಯುನಿಟ್ ಜಲ್ಲಿಕಲ್ಲ ಇದ್ದು, ಸದ್ರಿ ವಾಹನ ಮತ್ತು ಜಲ್ಲಿಕಲ್ಲ ನ್ನು ಮಹಜರು ಕ್ರಮ ಜರುಗಿಸಿ ವಶಕ್ಕೆ ಪಡೆಯಲಾಯ್ತು. ಸ್ವಾಧೀನಪಡಿಸಿದ ಜಲ್ಲಿಕಲ್ಲ ನ ಒಟ್ಟು ಅಂದಾಜು ಮೌಲ್ಯ 15000/- ರೂ ಆಗಿರುತ್ತದೆ. ಆರೋಪಿತ ಮೋಹನ ಎಸ್. ಶೆಟ್ಟಿರವರು ಯಾವುದೇ ಪರವಾನಿಗೆ ಹೊಂದದೇ, ಸರ್ಕಾರಕ್ಕೆ ಯಾವುದೇ ರಾಜಧನ ಪಾವತಿಸದೇ ಎಲ್ಲಿಯೋ ಸರಕಾರದ ಸೊತ್ತಾದ ಜಲ್ಲಿಕಲ್ಲ ನ್ನು ಕಳ್ಳತನದಿಂದ ತೆಗೆದು ಜಲ್ಲಿಕಲ್ಲ ನ್ನು ಅಕ್ರಮವಾಗಿ ಸಾಗಾಟ ಮಾಡಿರುವುದು ಕಂಡು ಬಂದಿರುತ್ತದೆ.
ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ:208/2025 ಕಲಂ: 4(1), 4(1A), 21(1) (2) MMRD ACT AND US 3(1), 42(1), 44 KMMC RULE 1944 AND US 303(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.