ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದ ಎಲಿಮಿನೇಷನ್ ನಡೆಯಲಿದೆ. ನಾಮಿನೇಟ್ ಆಗಿರುವ ಸ್ಪರ್ಧಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ.
ಈ ಬಾರಿಯ ಬಿಗ್ ಬಾಸ್ ಮನೆಯಿಂದ ಮೊದಲ ಒಂದು ದಿನದಲ್ಲೇ ಕರಾವಳಿ ಮೂಲದ ರಕ್ಷಿತಾ ಶೆಟ್ಟಿ ಅವರು ಹೊರಬಂದಿದ್ದರು. ರಕ್ಷಿತಾ ಅವರ ಶಾಕಿಂಗ್ ಎಲಿಮಿನೇಷನ್ ಅನೇಕರನ್ನು ಶಾಕ್ ಆಗಿಸಿತ್ತು.
ಮಾಳು, ಸ್ಪಂದನಾ ಹಾಗೂ ರಕ್ಷಿತಾ ನಡುವೆ ರಕ್ಷಿತಾ ಅವರನ್ನು ಬಿಗ್ ಬಾಸ್ ಮನೆಯಿಂದ ಆಚೆ ಕಳುಹಿಸಲಾಗಿತ್ತು.
ರಕ್ಷಿತಾ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಮತ್ತೆ ಬರುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಈಗ ರಕ್ಷಿತಾ ಅವರನ್ನು ಕಿಚ್ಚ ಸುದೀಪ್ ಅವರು ವೇದಿಕೆಗೆ ಕರೆದಿದ್ದಾರೆ.
ಮನೆಯಿಂದ ಹೋಗುವಾಗ ಯಾರೂ ನನ್ನನ್ನು ಸಪೋರ್ಟ್ ಮಾಡಿಲ್ಲ. ಈಗ ಒಳಗೆ ಹೋಗಿ ಹೊರಗೆ ಹಾಕಿದ್ದಕ್ಕೆ ಕಾರಣ ಕೇಳುತ್ತೇನೆ. ಯಾರು ನನಗೆ ಸ್ಟ್ಯಾಂಡ್ ಕೊಡಲಿಲ್ಲ. ಅವರಿಗೆ ಗೊತ್ತಿಲ್ಲ ನಾನು ಹೇಗೆ ಆಡ್ತೀನಿ ಅಂಥ ಅವರು ಕಲರ್ ನೋಡಿ ನನ್ನನ್ನು ಜಡ್ಜ್ ಮಾಡಿದ್ದಾರೆ ಎಂದು ರಕ್ಷಿತಾ ಹೇಳಿದ್ದಾರೆ.
ಇನ್ನೊಂದು ಕಡೆ ಎಲಿಮಿನೇಷನ್ ವಿಚಾರದಲ್ಲಿ ಈ ಬಾರಿ ಇಬ್ಬರು ಹೊರಗೆ ಹೋಗುತ್ತಾರೆ ಎನ್ನಲಾಗುತ್ತಿದೆ.
