Home Karavali Karnataka ಉಡುಪಿ : ರಂಗೋಲಿಯಲ್ಲಿ ಮೂಡಿಬಂದ ಬ್ರಹ್ಮಶ್ರೀ ನಾರಾಯಣ ಗುರುಗಳು….!!

ಉಡುಪಿ : ರಂಗೋಲಿಯಲ್ಲಿ ಮೂಡಿಬಂದ ಬ್ರಹ್ಮಶ್ರೀ ನಾರಾಯಣ ಗುರುಗಳು….!!

ಉಡುಪಿ : ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರಮುಖ ಸಂದೇಶಗಳೆಂದರೆ “ಒಂದೇ ಜಾತಿ, ಒಂದೇ ಮತ, ಒಂದೇ ದೇವರು”, “ವಿದ್ಯೆಯಿಂದ ಪ್ರಬುದ್ಧರಾಗಿ, ಸಂಘಟನೆಯಿಂದ ಬಲಿಷ್ಠರಾಗಿ”, ಹಾಗೂ “ವಿದ್ಯೆಗೆ ಜಾತಿ, ಮತಗಳ ಭೇದವಿಲ್ಲ” ಎಂಬುದು. ಅವರು ಜಾತಿ ವ್ಯವಸ್ಥೆ, ಅಸಮಾನತೆ ಮತ್ತು ದಬ್ಬಾಳಿಕೆಯನ್ನು ವಿರೋಧಿಸಿ, ಎಲ್ಲಾ ಮಾನವರಿಗೂ ಸಮಾನತೆ ಮತ್ತು ಅದರ ಮಹತ್ವವನ್ನು ಸಾರಿದರು.

ದೇವಸ್ಥಾನಗಳ ಬಾಗಿಲು ಎಲ್ಲರಿಗೂ ತೆರೆದಿರಬೇಕು ಮತ್ತು ಧಾರ್ಮಿಕ ಸಮಾನತೆಯನ್ನು ಪ್ರತಿಪಾದಿಸಿದರು. ಈ ಸಂತನನ್ನು ನೆನೆಸಿಕೊಂಡು 171ನೇ ಜನ್ಮದಿನದ ಅಂಗವಾಗಿ ಬಾರ್ಕೂರಿನ ಕಲಾವಿದೆ. ವಿಶಾಲ ಮಹೇಶ್ ಪೂಜಾರಿ. ರಂಗೋಲಿಯಿಂದ ಬಣ್ಣ ಬಳಿದು. ಸುಮಾರು ನಾಲ್ಕು ಗಂಟೆಗಳ ಸತತ ಪರಿಶ್ರಮದಿಂದ ಐದು ಅಡಿ ಉದ್ದ ನಾಲ್ಕು ಅಡಿ ಅಗಲ ದ ರಂಗೋಲಿಯ ಕಲಾ ಕೃತಿಯನ್ನು ಬಾರ್ಕೂರಿನ ಶಿವಗಿರಿ ಕ್ಷೇತ್ರದಲ್ಲಿ.. ( ನಾರಾಯಣ ಗುರು ಮಂದಿರದಲ್ಲಿ ರಚಿಸಿದ್ದಾರೆ.. ನಾಳೆ ಗುರು ಜಯಂತಿಯ ಪ್ರಯುಕ್ತ, ಕಲಾ ಆಸಕ್ತರು ಹಾಗೂ ಗುರು ಭಕ್ತರು ಮತ್ತು ಸಾರ್ವಜನಿಕರಿಗೆ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.