Home Crime ಮಂಗಳೂರು: ಅಕ್ರಮ ಗಾಂಜಾ ಸಾಗಾಟ : ಆರೋಪಿ ಮಹೇಶ್ ಶೆಟ್ಟಿ ಅರೆಸ್ಟ್…!!

ಮಂಗಳೂರು: ಅಕ್ರಮ ಗಾಂಜಾ ಸಾಗಾಟ : ಆರೋಪಿ ಮಹೇಶ್ ಶೆಟ್ಟಿ ಅರೆಸ್ಟ್…!!

ಮಂಗಳೂರು: ನಗರದಲ್ಲಿ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತದ್ದಾಗ ಮಾಹಿತಿ‌ ಮೇರೆಗೆ ಅಬಕಾರಿ ಅಧಿಕಾರಗಳು ಸೊತ್ತುಗಳು ಸಹಕಾರ ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿ ಡ್ರಗ್ ಪೆಡ್ಲರ್ ಬಜಲಕೆರೆ ಚುನ್ನಿ ಯಾನೆ ಮಹೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಆರೋಪಿ ಮಹೇಶ್ ಶೆಟ್ಟಿ ಪೊಲೀಸರ ಕಣ್ಣು ತಪ್ಪಸಿ ಸುಮಾರು ವರ್ಷಗಳಿಂದ ತಲಪಾಡಿಯಿಂದ ಮುಲ್ಕಿ ತನಕ ಅಕ್ರಮ ಡ್ರಗ್ಸ್ ಹಾಗೂ ಗಾಂಜಾ ದಂಧೆ ನಡೆಸಿತ್ತಿದ್ದ ಎಂದು ಮಾಹಿತಿ ತಿಳಿಯಲಾಗಿದೆ.

ಅಬಕಾರಿ ಅಧಿಕಾರಿಗಳು ಆರೋಪಿಯಿಂದ ವಾಹನ, ಗಾಂಜಾ ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಘಟನೆ ವಿವರ:
ಮಾನ್ಯ ಅಬಕಾರಿ ಜಂಟಿ ಆಯುಕ್ತರು ಜಾರಿ ಮತ್ತು ತನಿಖೆ, ಮಂಗಳೂರು ವಿಭಾಗರವರ ಆದೇಶದಂತೆ ,ಅಬಕಾರಿ ಉಪ ಆಯುಕ್ತರು ದ.ಕ.ಜಿಲ್ಲೆರವರ ನಿರ್ದೇಶನದಂತೆ, ಹಾಗೂ ಅಬಕಾರಿ ಉಪ ಅಧಿಕ್ಷಕರು ಮಂಗಳೂರು ಉಪ ವಿಭಾಗ-1 ರವರ ನೇತೃತ್ವದಲ್ಲಿ ದಿ: 24-04-2025ರಂದು ಮುಂಜಾನೆ 12.40 ಗಂಟೆ ಸಮಯಕ್ಕೆ ಅಬಕಾರಿ ಉಪ ನಿರೀಕ್ಷಕರು(1), ಮತ್ತು (2) ಮಂಗಳೂರು ದಕ್ಷಿಣ ವಲಯ -1 ಹಾಗೂ ಅಬಕಾರಿ ಉಪ ನೀರಿಕ್ಷಕರು, ಮಂಗಳೂರು ಉಪ ವಿಭಾಗ -1 ಮತ್ತು ಸಿಬ್ಬಂದಿಯವರು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಟೇಟ್ ಬ್ಯಾಂಕ್ ನಿಂದ ಹೊಯಿಗೆ ಬಜಾರ್ ರಸ್ತೆಯಲ್ಲಿರುವ ಗೂಡುಶೇಡ್ಡೆಗೆ ಹೋಗುವ ನಿರೇಶ್ವಲ್ಯ ರಸ್ತೆ ಬದಿಯಲ್ಲಿ ಮಹೇಶ್ ಶೆಟ್ಟಿ, ಬಿನ್ ರಾಮಾನಂದ ಶೆಟ್ಟಿ, ಗಾರ್ಡನ್ ರಥಬೇದಿ, ಮಂಗಳೂರು ಎಂಬವನು ಹೊಂಡ ಆಕ್ಟಿವಾ ವಾಹನದಲ್ಲಿ 258 ಗ್ರಾಂ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ಸೋತ್ತುಗಳನ್ನು ವಶಪಡಿಸಿ ಆರೋಪಿ ವಿರುದ್ಧ N.D. P. S ಕಾಯ್ದೆ 1985 ರ 8(c) 25, 27(b) ಮತ್ತು 20(b), (ii)(A) ರಂತೆ ಶಿಕ್ಷಾರ್ಹವಾಗಿರುವುದರಿಂದ ಈ ಬಗ್ಗೆ ಅಬಕಾರಿ ಉಪ ನಿರೀಕ್ಷಕರು-1, ಮಂಗಳೂರು ದಕ್ಷಿಣ ವಲಯ- 1 ರವರು ಘೋರ ಮೊಕದ್ದಮೆಯನ್ನು ದಾಖಲಿಸಲಾಗಿದ್ದು, ಪ್ರಕರಣದಲ್ಲಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಶಪಡಿಸಿಕೊಂಡ ಸ್ವತ್ತಿನ ಒಟ್ಟು ಮೌಲ್ಯ: 72,250/- ರೂಗಳು ಆಗಿರುತ್ತದೆ.