ಶಂಕರನಾರಾಯಣ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ವಾಹನ ಚಾಲಕನೊಬ್ಬ ಯುವತಿಯೊಬ್ಬಳಿಗೆ ಮದುವೆಯಾಗುತ್ತೇನೆ ಎಂದು ಪ್ರೀತಿಯ ನಾಟಕವಾಡಿ ಮೋಸ ಮಾಡಿದ ಘಟನೆ ನಡೆದಿದೆ.
ಮೋಸ ಮಾಡಿದ ಯುವಕ ಭರತ್ ಎಂದು ತಿಳಿದು ಬಂದಿದೆ.
ಮೋಸ ಹೋದ ಯುವತಿ ಅನುಷಾ ಆತ್ಮಹತ್ಯೆ ಯತ್ನಸಿದ್ದಾರೆ.ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರುಣ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ: ಪಿರ್ಯಾದಿದಾರರಾದ ಅರುಣ (25) ಸಿದ್ದಾಪುರ ಗ್ರಾಮ ಕುಂದಾಪುರ ತಾಲೂಕು ಇವರು ಪರಿಶಿಷ್ಟ ಜಾತಿಗೆ ಸೇರಿದ್ದು ಫಿರ್ಯಾದಿದಾರರ ತಂಗಿ ಅನುಷಾ (23) ರವರು ಸಿದ್ದಾಪುರದ ಗಿರಿಜ ಸಿಲ್ಕ್ ನಲ್ಲಿ 2 ವರ್ಷಗಳಿಂದ ಕೆಲಸಮಾಡಿಕೊಂಡಿರುತ್ತಾಳೆ, ಆಪಾದಿತ ಹಳ್ಳಿಹೊಳೆ ಭರತ್ ಇತನು ಪಿರ್ಯಾದಿದಾರರ ಪಿಕಫ್ ವಾಹನಕ್ಕೆ ಸುಮಾರು 6 ತಿಂಗಳ ಹಿಂದೆ ಚಾಲಕನಾಗಿ ಕೆಲಸಕ್ಕೆ ಬಂದಿದ್ದು ಆತನು ಪ್ರತಿದಿನ ಫಿರ್ಯಾದಿದಾರರ ಮನೆಗೆ ಹೋಗಿ ವಾಹನವನ್ನು ತೆಗೆದುಕೊಂಡು ಬಾಡಿಗೆಗೆ ಹೋಗುತ್ತಿದ್ದನು, ಆಪಾದಿತ ಭರತ್ ಆ ಸಮಯದಲ್ಲಿ ಸುಮಾರು 2 ತಿಂಗಳುಗಳಿಂದ ಫಿರ್ಯಾದಿದಾರ ತಂಗಿ ಅನುಷಾಳನ್ನು ಪ್ರೀತಿ ಮಾಡುತ್ತಿರವ ವಿಷಯ ಫಿರ್ಯಾದಿದಾರರ ಮನೆಯವರಿಗೆ ತಿಳಿದಿರುತ್ತದೆ, ಭರತನು ಕೆಲವೊಮ್ಮೆ ಅನುಷಾಳನ್ನು ಸಿದ್ದಾಪುರದಿಂದ ಆತನ ಬೈಕ್ ನಲ್ಲಿ ತಾರೆಕೊಡ್ಲು ಬಸ್ ನಿಲ್ದಾಣಕ್ಕೆ ತಂದು ಬಿಟ್ಟು ಹೋಗುತ್ತಿದ್ದನು, ಫಿರ್ಯಾದಿದಾರರ ಮನೆಯವರು ಅನುಷಾಳಲ್ಲಿ ಭರತನ ಬಗ್ಗೆ ಕೇಳಿದಾಗ ಆತನು ತನ್ನನ್ನು ಮದುವೆ ಆಗುತ್ತೇನೆ ಎಂಬುದಾಗಿ ತಿಳಿಸಿರುತ್ತಾನೆ ಎಂಬುದಾಗಿ ಹೇಳಿರುತ್ತಾಳೆ, ಭರತನಿಗೆ ಅನುಷಾಳು ಪರಿಶಿಷ್ಟ ಜಾತಿ ಎಂಬುದು ತಿಳಿದಿರುತ್ತದೆ, ದಿನಾಂಕ 12/06/2025 ರಂದು ಮದುವೆ ಬಗ್ಗೆ ವಿಚಾರಿಸಿದ್ದು ದಿನಾಂಕ 09/06/2025 ರಂದು ಸಂಜೆ 6:00 ಗಂಟೆಗೆ ಭರತನು ನಿನ್ನನ್ನು ಮದುವೆಯಾಗುವುದಿಲ್ಲ ಎಂಬುದಾಗಿ ಹೇಳಿ ತನ್ನನ್ನು ತಾರೆಕೊಡ್ಲು ಬಸ್ ನಿಲ್ದಾಂದ ಬಳಿ ಬಿಟ್ಟು ಹೋಗಿದ್ದು ಆದುದರಿಂದ ಅನುಷಳು ದಿನಾಂಕ 11/06/2025 ರಂದು ಇಲಿಗೆ ಹಾಕುವ ವಿಷದ ಟ್ಯೂಬ್ ಸೇವಿಸಿರುತ್ತೇನೆ ಎಂಬುದಾಗಿ ತಿಳಿಸಿದ್ದು, ಫಿರ್ಯಾದಿದಾರರು ಕೂಡಲೇ ಅವರ ಕಾರಿನಲ್ಲಿ ಅಮ್ಮ ಹಾಗೂ ಚಿಕ್ಕಮ್ಮನೊಂದಿಗೆ ಕುಂದಾಪುರ ಸರ್ಕರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು ಅಲ್ಲಿನ ವೈದ್ಯಾಧಿಕಾರಿಯವರು ಚಿಕಿತ್ಸೆಯನನ್ನು ನೀಡಿ ಐಸಿಯು ಘಟಕದಲ್ಲಿ ಇರಿಸಿರುತ್ತಾರೆ, ಭರತನು ಅನುಷಾಳನ್ನು ಪರಿಶಿಷ್ಟ ಜಾತಿಯೆಂದು ತಿಳಿದು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಅವಳಿಗೆ ಮೋಸಮಾಡಿರುವುದರಿಂದ ಅನುಷಾಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 58/2025 ಕಲಂ: 3(1) (r )(s) SC/ST Act & 318 BNS ರಂತೆ ಪ್ರಕರಣ ದಾಖಲಾಗಿರುತ್ತದೆ