Home Crime ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ…!!

ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ…!!

ಶಂಕರನಾರಾಯಣ: ಉಡುಪಿ ಜಿಲ್ಲೆಯ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿ ವಸಂತ್ ಎಂದು ತಿಳಿಯಲಾಗಿದೆ.

ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಪಿರ್ಯಾದಿದಾರರಾದ ರವೀಂದ್ರ (50),ಶಂಕರನಾರಾಯಣ ಗ್ರಾಮ ಇವರ ಅಣ್ಣ ವಸಂತ (60) ರವರು ಪಿರ್ಯಾದಿದಾರರ ಪಕ್ಕದ ಮನೆಯಲ್ಲಿ ವಾಸ ಮಾಡಿಕೊಂಡಿದ್ದು ಅವರು ವಿವಾಹವಾಗದೇ ಇದ್ದು, ಕೆಲಸಕ್ಕೆ ಹೋಗದೇ ವಿಪರೀತ ಮಧ್ಯಪಾನ ಮಾಡುವ ಛಟ ಹೊಂದಿದ್ದು ದಿನಾಂಕ 30/07/2025 ರಂದು ರಘುರಾಮ ರವರು ವಸಂತ ಕಳೆದ 2 ದಿನಗಳಿಂದ ತೋಟದ ಕಡೆ ಕೆಲಸಕ್ಕೆ ಬಂದಿಲ್ಲವಾಗಿ ಪಿರ್ಯಾದಿದಾರರ ಬಳಿ ಹೇಳಿದ್ದು ಆಗ ಪಿರ್ಯಾದಿದಾರರು ಅವರ ಮನೆಗೆ ಒಳಗೆ ಹೋಗಿ ನೋಡಿದ್ದು ವಸಂತ ರವರು ಮನೆಯ ಎದುರಿನ ಹಾಲಿನ ಪಾಕಾಸಿಗೆ ನೈಲಾನ್ ಹಗ್ಗವನ್ನು ಕಟ್ಟಿ ಅದರ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 26/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.