ಕೋಟ: ಉಡುಪಿ ಜಿಲ್ಲೆಯ ಜಿಲ್ಲೆಯ ಕೋಟ ಸಮೀಪದ ಮೆತ್ತಗೊಳಿ ಎಂಬಲ್ಲಿ ಅಂದರ್ ಬಾಹರ್ ಇಸ್ಪೀಟು ಆಟ ಆಡುತ್ತಿರುವಾಗ ಪೊಲೀಸರು ದಾಳಿ ನಡೆಸಿದ್ದಾರೆ.
ಪೊಲೀಸರು ದಾಳಿ ನಡೆಸಿದಾಗ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಜುಗಾರಿ ಆಟಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಂಡದ್ದಾರೆ.ಉಳಿದ ಮಂದಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಪ್ರಕರಣದ ವಿವರ : ದಿನಾಂಕ 13/07/2025 ರಂದು ರಾಘವೇಂದ್ರ ಸಿ, ಪೊಲೀಸ್ ಉಪನಿರೀಕ್ಷಕರು, ಕೋಟ ಪೊಲೀಸ್ ಠಾಣೆ ಇವರಿಗೆ ಬ್ರಹ್ಮಾವರ ತಾಲೂಕು ಬಿಲ್ಲಾಡಿ ಗ್ರಾಮದ ಮೆತ್ತಗೊಳಿ ಎಂಬಲ್ಲಿಯ ನಿಲೇಶ್ ರವರ ಕೊಳಿ ಶೆಡ್ ಬಳಿ ಅಂದರ್ ಬಾಹರ್ ಎಂಬ ಇಸ್ಪೀಟು ಆಟ ಆಡುತಿರುವುದಾಗಿ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದು ಆಟ ಆಡುತ್ತಿದ್ದವರು ಓಡಿ ಹೋಗಿದ್ದು,ಅದರಲ್ಲಿಇಸ್ಪೀಟು ಆಡುತ್ತಿದ್ದ 1) ಜಯಕರ, 2)ಚಕ್ರಪಾಣಿ, 3)ನಿಲೇಶ್, 4)ಜಗದೀಶ , 5)ಗೋಪಾಲ, 6)ಸದಾಶಿವ, 7)ಕಾಳಪ್ಪ ಇವರನ್ನು ಹಾಗೂ ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ ಒಟ್ಟು ನಗದು 9,880/-, ಮೊಬೈಲ್ ಹ್ಯಾಂಡ್ ಸೆಟ್ -8 ,ಕಾರು-1,ಸ್ಕೂಟರ್ -3,ರೌಂಡ್ ಟೇಬಲ್ -1,ಪ್ಲಾಸ್ಟೀಕ್ ಚೇರ್ ಗಳು-8, ಬೆಡ್ ಶೀಟ್ -1, ಇಸ್ಪೀಟ್ ಎಲೆಗಳನ್ನು ಸ್ವಾಧಿನಪಡಿಸಿಕೊಂಡಿದ್ದಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 128/2025 ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.