Home Crime ಕೇರಳದಲ್ಲಿ ನಡೆದ ಕೊಲೆ ಪ್ರಕರಣ : ಬೈಂದೂರು ಪೊಲೀಸರಿಂದ ಆರೋಪಿಯ ಬಂಧನ…!!

ಕೇರಳದಲ್ಲಿ ನಡೆದ ಕೊಲೆ ಪ್ರಕರಣ : ಬೈಂದೂರು ಪೊಲೀಸರಿಂದ ಆರೋಪಿಯ ಬಂಧನ…!!

ಬೈಂದೂರು : ಕೇರಳದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯೊಬ್ಬ ತಲೆಮರೆಸಿಕೊಂಡು ಉಡುಪಿ ಜಿಲ್ಲೆಯ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ವನನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಕಾಸರಗೋಡು ನಿವಾಸಿ ಮೆಲ್ವಿನ್ ಎಂದು ಗುರುತಿಸಲಾಗಿದೆ.

ಬೈಂದೂರು ಪೊಲೀಸರು ಆರೋಪಿಯನ್ನು ಬಂಧಿಸಿ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಪ್ರಕರಣದ ಸಾರಾಂಶ : ಈ ದಿನಾ ಕೇರಳ ರಾಜ್ಯದ ಮಂಜೇಶ್ವರ ಪೊಲೀಸ್ ಸ್ಟೇಶನ್ ಕ್ರೈಂ ನಂಬರ್ 573/2025 ಕಾಲಂ 103 109 ಬಿಎನ್ಎಸ್ ಪ್ರಕರಣದಲ್ಲಿ ಕೊಲೆ ಪ್ರಕರಣ ದಲ್ಲಿನ ಆರೋಪಿತನದ ಮೆಲ್ವಿನ್ ಪ್ರಾಯ 38 ವರ್ಷ ತಂದೆ ಲೂವಿಸ್ ಮಾಂಟೆರೋ ವಾಸ ನಲ್ಲಂಗಿಪಾದವು ಮಂಜೇಶ್ವರ ಕಾಸರಗೋಡು ಜಿಲ್ಲೆ ಕೇರಳ ರಾಜ್ಯ ಎಂಬಾತನನ್ನು ಬೈಂದೂರ್ ಸ್ಟೇಶನ್ ವ್ಯಾಪ್ತಿಯ ಕಾಲ್ತೊಡು ಬ್ಯಾತಿಯಾನಿ ಎಂಬಲ್ಲಿ ಪತ್ತೆಹಚ್ಚಿ ಆತನನ್ನು ಮಂಜೇಶ್ವರ ಪೊಲೀಸ್ ಸ್ಟೇಶನ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಬೈಂದೂರ್ ಶ್ರೀ ತಿಮ್ಮೇಶ್ ಬಿ.ಏನ್ ಪಿಎಸ್ಐ ಕೊಲ್ಲೂರು ಶ್ರೀ ವಿನಯ್ . ಕೆ ಹಾಗೂ ಸಿಬ್ಬಂದಿಗಳಾದ ನಾಗೇಂದ್ರ ಕೊಲ್ಲೂರು ಸ್ಟೇಶನ್ ಪರಯ್ಯ ಮಠಪತಿ. ಮಾಳಪ್ಪ ದೇಸಾಯಿ. ಚಿದಾನಂದ ಬೈಂದೂರು ಪೊಲೀಸ್ ಸ್ಟೇಶನ್ ರವರು ಪಾಲ್ಗೊಂಡಿರುತ್ತಾರೆ.