Home Karavali Karnataka ಮನೆಗೆ ಹೋಗಲು ಹತ್ತಿಸಿಕೊಳ್ಳದ ರಿಕ್ಷಾ : 4 ಆಟೋ ಖರೀದಿಸಿ ಬಾಡಿಗೆಗೆ ಕೊಟ್ಟ ಮಂಗಳಮುಖಿ…!!

ಮನೆಗೆ ಹೋಗಲು ಹತ್ತಿಸಿಕೊಳ್ಳದ ರಿಕ್ಷಾ : 4 ಆಟೋ ಖರೀದಿಸಿ ಬಾಡಿಗೆಗೆ ಕೊಟ್ಟ ಮಂಗಳಮುಖಿ…!!

ಹಿರಿಯ ತೃತೀಯ ಲಿಂಗಿಗಳಿಗೆ, ಗರ್ಭಿಣಿಯರಿಗೆ ಉಚಿತ ಸೇವೆ….

ಮಂಗಳೂರು : ಸಮಾಜದಲ್ಲಿ ಮಂಗಳಮುಖಿಯರೆಂದರೆ ತಾತ್ಸಾರದಿಂದ ಕಾಣುವವರೇ ಹೆಚ್ಚು. ಹಾಗಾಗಿ ಅವರು ಪ್ರತಿ ಹೆಜ್ಜೆಯಲ್ಲಿಯೂ ಅವಮಾನ ಅನುಭವಿಸುತ್ತಿದ್ದಾರೆ. ಇದೇ ರೀತಿ ಮನೆಗೆ ಹೋಗಲು ರಿಕ್ಷಾದವರು ತನ್ನನ್ನು ಹತ್ತಿಸಿಕೊಳ್ಳದ್ದಕ್ಕೆ ಅವಮಾನಗೊಂಡ ಮಂಗಳಮುಖಿಯೊಬ್ಬರು, ನಾಲ್ಕು ರಿಕ್ಷಾ ಖರೀದಿಸಿ ಬಾಡಿಗೆ ನೀಡುತ್ತಿದ್ದಾರೆ.

ಹೌದು, ಅವರೇ ಸ್ವಾಭಿಮಾನದ ಅನಿ ಮಂಗಳೂರು. ಮೂಲತಃ ರಾಯಚೂರಿನವರು. ಮಂಗಳೂರಿನಲ್ಲಿ ವಿದ್ಯಾಭ್ಯಾಸಕ್ಕೆ ಬಂದ ಇವರು ಇದೀಗ ಇಲ್ಲಿಯೇ ನೆಲೆ ನಿಂತಿದ್ದಾರೆ. ಬಿಎ ಬಳಿಕ ಬಿಎಡ್ ಎರಡು ಸೆಮಿಸ್ಟರ್ ಬರೆದ ಇವರು ಮಂಗಳಮುಖಿಯರಿಗೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಕಷ್ಟ ಎಂದು ಅರಿತು ಶಿಕ್ಷಣ ಮೊಟಕುಗೊಳಿಸಿದ್ದರು. ಜೀವನದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ.

ಅನಿ ಸಂಜೆ ಮನೆಗೆ ತೆರಳಲು ರಿಕ್ಷಾವನ್ನು ಅವಲಂಬಿಸಿದ್ದು, ಇವರಿಗೆ ಪ್ರತಿದಿನವೂ ರಿಕ್ಷಾದವರು ನಿಲ್ಲಿಸದ್ದಕ್ಕೆ ಸಂಕಷ್ಟ ಎದುರಾಗಿತ್ತು. ಒಂದು ದಿನವಂತೂ ಸಂಜೆಯಿಂದ ರಾತ್ರಿಯಾದರೂ ಯಾವ ರಿಕ್ಷಾದವರೂ ಇವರನ್ನು ಆಟೋದೊಳಗೆ ಹತ್ತಿಸಿಕೊಳ್ಳಲು ಒಪ್ಪಿರಲಿಲ್ಲ. ಇದರಿಂದ ಅವರು ಮನೆಗೆ ನಡೆದುಕೊಂಡೇ ಹೋಗಬೇಕಾಯಿತು. ಆ ದಿನ ಅವರು ರಿಕ್ಷಾ ಖರೀದಿಸಿ ಬಾಡಿಗೆ ನೀಡುವ ನಿರ್ಧಾರ ಕೈಗೊಂಡರು.