Home Karavali Karnataka ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷರಾಗಿ ಅಲೆವೂರು ದಿನೇಶ್ ಕಿಣಿ ಆಯ್ಕೆ…!!

ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷರಾಗಿ ಅಲೆವೂರು ದಿನೇಶ್ ಕಿಣಿ ಆಯ್ಕೆ…!!

ಉಡುಪಿ : ಕರ್ನಾಟಕ ಕರಾವಳಿಯ ಪ್ರಪ್ರಥಮ ಲಯನ್ಸ್ ಕ್ಲಬ್, ಪ್ರತಿಷ್ಠಿತ ಲಯನ್ಸ್ ಕ್ಲಬ್ ಉಡುಪಿ ಇದರ 2025-26ನೇ ಸಾಲಿನ ಅಧ್ಯಕ್ಷರಾಗಿ ಅಲೆವೂರು ದಿನೇಶ್ ಕಿಣಿ ಆಯ್ಕೆಯಾಗಿದ್ದಾರೆ.

ಅಲೆವೂರಿನ ಶಾಂತಿನಿಕೇತನ ಶಾಲಾ ಸಂಚಾಲಕರಾಗಿ, ಕೊರಂಗ್ರಪಾಡಿ ಸಹಕಾರಿ ವ್ಯಾವಸಾಯಿಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ದಿನೇಶ್ ಕಿಣಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು.

ಕಾರ್ಯದರ್ಶಿಯಾಗಿ ಡಾ.ರೋಶನ್ ಕುಮಾರ್ ಶೆಟ್ಟಿ ಹಾಗೂ ಕೋಶಾಧಿಕಾರಿಯಾಗಿ ರಮಾನಂದ ನಾಯಕ್ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳಾಗಿ ಜೊತೆ ಕಾರ್ಯದರ್ಶಿ ಪ್ರಕಾಶ್ ಎಂ.ಡಿ. ಭಟ್, ನಿಕಟಪೂರ್ವ ಅಧ್ಯಕ್ಷ ಲೂಯಿಸ್‌ ಲೋಬೊ, ಪ್ರಥಮ ಉಪಾಧ್ಯಕ್ಷ ನಾಗರಾಜ್ ಸಂಕೊಳ್ಳಿ, ದ್ವಿತೀಯ ಉಪಾಧ್ಯಕ್ಷ ವಿಜಯ ಕುಮಾರ್ ಮುದ್ರಾಡಿ, ತೃತೀಯ ಉಪಾಧ್ಯಕ್ಷ ಎಸ್.ಟಿ.ಕುಂದರ್, ಲಯನ್ ಟೇಮರ್ ಲೆಸ್ಲಿ ಕರ್ನೇಲಿಯೊ ಟೈಲ್ ಟ್ವಿಸ್ಟರ್ ಮನೋಜ್ ಪ್ರಭು, ಎಲ್.ಸಿ‌ಎಫ್ ಕೊ-ಆರ್ಡಿನೇಟರ್ ರಿಚರ್ಡ್ ರಾಡ್ರಿಗಸ್, ಜಿಎಟಿ ಕೊ-ಆರ್ಡಿನೇಟರ್ ಶ್ರೀನಿವಾಸ್ ಪೈ ಎಚ್., ಜಿಎಂಟಿ ಕೊ-ಆರ್ಡಿನೇಟರ್ ದಾಮೋದರ್ ಎಂ. ಶೆಟ್ಟಿ, ಜಿ.ಎಲ್.ಟಿ ಕೊ-ಆರ್ಡಿನೇಟರ್ ಡಾ.ಕೆ.ಕೆ. ಕಲ್ಕೂರ್, ಜಿ.ಎಸ್.ಟಿ ಕೊ-ಆರ್ಡಿನೇಟರ್ ವಿಷ್ಣುದಾಸ್‌ ಪಾಟೀಲ್, ಕಾರ್ಯಕ್ರಮ ಸಂಯೋಜಕಿ ರೇಖಾ ಪೈ, ಲಿಯೋ ಸಲಹೆಗಾರ್ತಿ ಕವಿತಾ ನೆಲ್ಸನ್, ಬುಲೆಟಿನ್ ಸಂಪಾದಕಿ ದೀವಾ ನಂಬಿಯಾರ್, ಸಾಂಸ್ಕೃತಿಕ ಸಂಯೋಜಕರಾಗಿ ರಂಜನ್ ಕಲ್ಕೂರ ಮತ್ತು ನವೀನ್ ಬಲ್ಲಾಳ್, ಶಾಶ್ವತ ಯೋಜನಾ ಸಂಯೋಜಕ ಡಿ.ಎಂ.ಶೆಟ್ಟಿ, ಲಯನ್ಸ್ ಕ್ವೆಸ್ಟ್ ಸಂಯೋಜಕಿ ಇಂದು ರಮಾನಂದ ಭಟ್, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಾಶ್ ಅಂದ್ರಾದೆ, ಪಾಸ್ಟ್ ಪ್ರೆಸಿಡೆಂಟ್ಸ್ ಫೋರಂ ಚೇರ್’ಪರ್ಸನ್ ಡಾ.ಎಚ್ ಭಾಸ್ಕರ್ ಶೆಟ್ಟಿ, ಲಯನ್ಸ್ ಭವನ ಟ್ರಸ್ಟ್ ಆಡಳಿತ ಟ್ರಸ್ಟಿಯಾಗಿ ರಾಜಗೋಪಾಲ್ ಎಸ್., ಪ್ರಥಮ ವರ್ಷದ ನಿರ್ದೇಶಕರಾಗಿ ಭಾಸ್ಕರ್ ಶೆಟ್ಟಿ, ವರ್ವಾಡಿ ಪ್ರಸಾದ್ ಶೆಟ್ಟಿ, ಸುಪ್ರೀತ್ ಹೆಗ್ಡೆ, ಉದಯ ಕುಮಾರ್ ಶೆಟ್ಟಿ ಮತ್ತು ರವೀಶ್ಚಂದ್ರ ಶೆಟ್ಟಿ, ದ್ವಿತೀಯ ವರ್ಷದ ನಿರ್ದೇಶಕರಾಗಿ ಡಾ. ಮನೋರಂಜನದಾಸ್ ಹೆಗ್ಡೆ, ರಂಜನ್ ಕೆ., ಶ್ರೀಧರ್ ಶೆಟ್ಟಿ ಅಲೆವೂರು, ಡಯಾನ ವಿಠಲ್ ಪೈ ಮತ್ತು ರಘುಪತಿ ರಾವ್, ಸಲಹೆಗಾರರಾಗಿ ಡಾ.ಎ.ರವೀಂದ್ರನಾಥ ಶೆಟ್ಟಿ, ಯು.ದಾಮೋದರ್ ಮತ್ತು ಅಲೆವೂರು ಗಣಪತಿ ಕಿಣಿ ಆಯ್ಕೆಯಾಗಿದ್ದಾರೆ.