ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಆತ್ಮಹತ್ಯೆಗೊಳಗಾದವರು ಉದ್ಯಾವರ ನಿವಾಸಿ ಮಧುಕರ ಎಂದು ತಿಳಿಯಲಾಗಿದೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ವಿವರ : ಪಿರ್ಯಾದಿದಾರರಾದ ಸುಶೀಲ (62) ಉದ್ಯಾವರ ಗ್ರಾಮ, ಉಡುಪಿರ ದೊಡ್ಡ ಮಗ ಮಧುಕರ (42)ರವರು ಅವಿವಾಹಿತರಾಗಿದ್ದು, ಮೀನುಗಾರಿಕೆ ಕೆಲಸ ಮಾಡಿಕೊಂಡಿರುತ್ತಾರೆ. ಕಳೆದ ಎರಡು ದಿನಗಳಿಂದ ಮೀನುಗಾರಿಕೆಗೆ ರಜೆ ಇದ್ದ ಕಾರಣ ಮನೆಯಲ್ಲಿದ್ದು ಖಿನ್ನತೆಗೆ ಒಳಗಾಗಿದ್ದು, ಮದ್ಯ ಸೇವನೆ ಮಾಡುತ್ತಿರುತ್ತಾರೆ. ಮಧುಕರ ರವರು ದಿನಾಂಕ 14/06/2025ರಂದು ಮದ್ಯಾಹ್ನ 1:15 ಗಂಟೆಯಿಂದ 1:45 ಗಂಟೆಯ ಮದ್ಯಾವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತಾನು ಮಲಗುವ ಕೋಣೆಯಲ್ಲಿನ ಮರದ ಪಕ್ಕಾಸಿಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಇರುವುದನ್ನು ಪಿರ್ಯಾದುದಾರರ ಕಿರಿಯ ಮಗ ಗಂಗಾಧರ ರವರು ನೋಡಿ ಓಡಿ ಬಂದು ಮಧುಕರ ರವರ ಕುತ್ತಿಗೆಯಿಂದ ನೈಲಾನ್ ಹಗ್ಗವನ್ನು ತುಂಡು ಮಾಡಿ ಕೆಳಗೆ ಇಳಿಸಿ ನೋಡುವಾಗ ಮಧುಕರ ರವರು ಮೃಪಟ್ಟಿರುತ್ತಾರೆ. ಮಧುಕರ ರವರು ಮದುವೆಯಾಗದೇ ಖಿನ್ನತೆ ಒಳಗಾಗಿಯೊ ಅಥವಾ ಇನ್ನಾವುದೋ ಕಾರಣದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಅವರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣಾ ಯು. ಡಿ. ಅರ್ ಕ್ರಮಾಂಕ 18/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.