ಯುವ ವಿಚಾರ ವೇದಿಕೆ ಕೊಳಲಗಿರಿ- ಕೆಸರಡ್ ಗೊಬ್ಬುಗ ಬೆನ್ನಿ ಮಲ್ಪುಗ…
ಬ್ರಹ್ಮಾವರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಘ ಯುವವಿಚಾರ ವೇದಿಕೆ (ರಿ) ಕೊಳಲಗಿರಿ ಇವರ ಜನಪರ ಸಾಮಾಜಿಕ ಚಟುವಟಿಕೆಗಳಲ್ಲೊಂದಾದ ಹಡಿಲು ಭೂಮಿ ಕೃಷಿ ಕಾರ್ಯದ ಸಾಂಕೇತಿಕ ಆರಂಭ ಮತ್ತು ಕೆಸರುಗದ್ದೆಯಲ್ಲಿ ಮನೋರಂಜನಾ ಆಟೋಟ ಸ್ಪರ್ಧಾ ಕಾರ್ಯಕ್ರಮ “ಕೆಸರ್ಡ್ ಒಂಜಿ ದಿನ” ಆಮ್ಮುಂಜೆ ಪರಿಸರದಲ್ಲಿ ನಡೆಯಿತು. ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬೈ ಉದ್ಯಮಿ ಮೈಕಲ್ ಡಿಸೋಜ, ಉಪ್ಪೂರು ಸಹಕಾರಿ ಸಂಘದ ನಿರ್ದೇಶಕರಾದ ರಮೇಶ್ ಕರ್ಕೇರಾ ಉಗ್ಗೆಲ್ ಬೆಟ್ಟು, ಹಿರಿಯರಾದ ಮಾಧವ ಪಾಣ, ಸಂಗೀತಗಾರ ಸಂತೋಷ್ ಪಾಣ, ತುಳು ರಕ್ಷಣಾ ವೇದಿಕೆ ರೋಷನ್ ಡಿಸೋಜಾ, ಪೀಟರ್ ಡಿಸೋಜಾ ತೋಡಕಡಿ, ಅಪ್ಪಿ ಪೂಜಾರಿ ಮತ್ತಿತರರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡ ಕಾರ್ಯಕ್ರಮದಲ್ಲಿ ಅಮ್ಮುಂಜೆಯ ಯುವ ಕೃಷಿಕ ರಿತೇಶ್ ಪೂಜಾರಿ ರವರನ್ನು ಸನ್ಮಾನಿಸಲಾಯಿತು. ಕೆಸರ್ ಗದ್ದೆಯಲ್ಲಿ ಸ್ಪರ್ಧೆಗಳನ್ನು ಮನೋರಂಜನ ಆಟೋಟಗಳನ್ನು ನಡೆಸಲಾಯಿತು.
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಭಾಸ್ಕರ್ ಡಿ ಶೆಟ್ಟಿ , ಆಲ್ವಿನ್ ಡಿಸೋಜಾ, ದೈವ ನರ್ತಕರು ವಿಜಯ ಪಾಣ ತೋನ್ಸೆ, ಸುಷ್ಮಾ ಧೀರಜ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಯುವ ವಿಚಾರ ವೇದಿಕೆಯ ಮಹತ್ವಾಕಾಂಕ್ಷಿ ಯೋಜನೆ ಯಾದ ಹಡಿಲು ಭೂಮಿ ಕೃಷಿಗೆ ಗದ್ದೆಯಲ್ಲಿ ನಟ್ಟಿ ನೆಡುವ ಮೂಲಕ ಸಮಾರಂಭವನ್ನು ಮುಕ್ತಾಯಗೊಳಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಪದಾಧಿಕಾರಿಗಳಾದ ಅಶೋಕ್ ಕುಮಾರ್, ರವೀಂದ್ರ ಕುಮಾರ್, ಶಶಿಕುಮಾರ್ , ಸುಕೇಶ್ ಪಾಣ, ಹೇಮಂತ್, ಶಿವಾನಂದ , ಶಕುಂತಲ ಸುಕೇಶ್, ಸೌಮ್ಯ ಶೆಟ್ಟಿ, ಶಾಂತಾ ಸೆಲ್ವರಾಜ್, ಸುಕನ್ಯಾ ಉಪಸ್ಥಿತರಿದ್ದರು. ಸುಬ್ರಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಣೆ ನಡೆಸಿದರು.










