Home Karavali Karnataka ಮಂಗಳೂರು: ವಿಶೇಷ ಕಾರ್ಯಪಡೆ ರಚನೆ : ಶರಣ್‌ ಪಂಪ್‌ವೆಲ್‌ ಸ್ವಾಗತ : ‘ಆ್ಯಂಟಿ ಹಿಂದೂ ಸ್ಪೆಷಲ್‌...

ಮಂಗಳೂರು: ವಿಶೇಷ ಕಾರ್ಯಪಡೆ ರಚನೆ : ಶರಣ್‌ ಪಂಪ್‌ವೆಲ್‌ ಸ್ವಾಗತ : ‘ಆ್ಯಂಟಿ ಹಿಂದೂ ಸ್ಪೆಷಲ್‌ ಟಾಸ್ಕ್ ಫೋರ್ಸ್‌’ ಆಗದಿರಲಿ…!

ಮಂಗಳೂರು: ಕರಾವಳಿಯಲ್ಲಿ ಕೋಮು ಸಂಘರ್ಷ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶೇಷ ಕಾರ್ಯ ಪಡೆ ರಚಿಸಿರುವುದನ್ನು ಸ್ವಾಗತಿಸುವುದಾಗಿ ವಿಶ್ವಹಿಂದೂ ಪರಿಷತ್‌ ಪ್ರಾಂತ ಸಹಕಾರ್ಯದರ್ಶಿ ತಿಳಿಸಿದ್ದಾರೆ.

ಈ ವಿಶೇಷ ಕಾರ್ಯಪಡೆ ಹಿಂದೂಗಳನ್ನು ಮಾತ್ರ ಗುರಿಯಾಗಿಸಿ ಕೆಲಸ ಮಾಡದೆ ನ್ಯಾಯಯುತವಾಗಿ ಕಾರ್ಯನಿರ್ವಹಿಸಲಿ. ಇದು “ಆ್ಯಂಟಿ ಹಿಂದೂ ಸ್ಪೆಷಲ್‌ ಟಾಸ್ಕ್ ಫೋರ್ಸ್‌’ ಆಗದಿರಲಿ. ಕರಾವಳಿಯಲ್ಲಿ ಸಂಘರ್ಷಕ್ಕೆ ಕಾರಣವಾಗುವ ಲವ್‌ ಜಿಹಾದ್‌, ಮತಾಂತರ, ಗೋಹತ್ಯೆ, ಗೋವುಗಳ ಅಕ್ರಮ ಸಾಗಾಟ, ಡ್ರಗ್ಸ್‌, ಮರಳು ದಂಧೆ ಸೇರಿದಂತೆ ಎಲ್ಲ ಅಕ್ರಮ ದಂಧೆಗಳಿಗೂ ಕಡಿವಾಣ ಬೀಳಲಿ ಎಂದು ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.