ಮಂಗಳೂರು: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಚಾಲಕನೊಬ್ಬನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿರುತ್ತಾರೆ.
ಬಂಧಿತನನ್ನು ಮೊಹಮ್ಮದ್ ನಿಜಾಂ ಅಲಿಯಾಸ್ ನಿಜ್ಜು ಎಂದು ಗುರುತಿಸಲಾಗಿದೆ. ಬೆಳಗ್ಗೆ ಕಣ್ಣೂರು ಭಾಗದಿಂದ ಬರುತ್ತಿದ್ದ ಪಿಕಪ್ ವಾಹನವನ್ನು ಪಡೀಲ್ ಜಂಕ್ಷನ್ ಹತ್ತಿರ ಪೊಲೀಸ್ ಚೆಕ್ಪೋಸ್ಟ್ನಲ್ಲಿ ತಡೆದ ಪೊಲೀಸರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ಅದರಲ್ಲಿ ಮರಳು ಇರುವುದಾಗಿ ಕಂಡು ಬಂದಿದೆ.
ಮರಳಿಗಾಗಿ ಯಾವುದೇ ಕಾನೂನಾತ್ಮಕ ಪರವಾನಿಗೆಯು ಇಲ್ಲದೆ ಇರುವುದನ್ನು ತಿಳಿದ ಪೊಲೀಸರು, ಆತನನ್ನು ವಿಚಾರಣೆಗೆ ಒಳಪಡಿಸಿದರು.
ವಿಚಾರಣೆಯಲ್ಲಿ ಆರೋಪಿ ಅರ್ಕುಳ ಮೈದಾನದಿಂದ ಮರಳು ತುಂಬಿಸಿಕೊಂಂಡಿದ್ದೆಂಬುದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸರು 4 ಲಕ್ಷ ರೂಪಾಯಿ ಮೌಲ್ಯದ ಪಿಕಪ್ ವಾಹನ ಮತ್ತು ಸುಮಾರು 2,500 ರೂ. ಮೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದಾರೆ.