ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ವ್ಯಕ್ತಿಯೊಬ್ಬರಿಗೆ ಇನ್ವೆಸ್ಟ್ ಮಾಡುವಂತೆ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.
ವಂಚನೆಗೆ ಒಳಗಾದವರು ಹೆಬ್ರಿಯ ಶಿವಪುರ ನಿವಾಸಿ ವಾಸುದೇವ ಪುತ್ತಿ ಎಂದು ತಿಳಿದು ಬಂದಿದೆ.
ವಂಚನೆ ಮಾಡಿದವ ರೋಹಿತ್ ಕೆ ಎಂದು ಗುರುತಿಸಲಾಗಿದೆ.
ಘಟನೆ ವಿವರ : ಪಿರ್ಯಾದಿ ವಾಸುದೇವ ಪುತ್ತಿ (65) ಶಿವಪುರ ಗ್ರಾಮ, ಹೆಬ್ರಿ ತಾಲೂಕು ಇವರು ಮೊದಲು 1995 ರಿಂದ 2020 ರವರೆಗೆ ಬೆಂಗಳೂರಿನ ಜಿಗಣಿಯಲ್ಲಿ ಎ,ಎಫ್,ಡಿ,ಸಿ ಕಂಪೆನಿಯಲ್ಲಿ ಮೆಟೀರಿಯಲ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು 2020 ರಲ್ಲಿ ನಿವೃತ್ತಿಯಾದ ನಂತರ ಪಿರ್ಯಾದುದಾರಿಗೆ ಪರಿಚಯದ ಬೆಂಗಳೂರು ಇಲ್ಲಿಯ ಮೈಲಾರಿ ಆಗ್ರೋ ಪ್ರೋಡಕ್ಟ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ರೋಹಿತ್ ಕೆ ಪಿರ್ಯಾದುದಾರನ್ನು ಸಂಪರ್ಕಿಸಿ ಕಂಪೆನಿಯಲ್ಲಿ ಇನ್ ವೆಸ್ಟ್ ಮಾಡುವಂತೆ ನಂಬಿಸಿ ಪಿರ್ಯಾದುದಾರರು ಸದ್ರಿಕಂಪೆನಿಯಲ್ಲಿ 14/09/2021 ರಿಂದ 28/01/2022 ರವರೆಗೆ ಒಟ್ಟು ನಾನು 5 ಲಕ್ಷ 50 000 ಹಣವನ್ನು ಹೂಡಿಕೆ ಮಾಡಿ ಸದ್ರಿ ಹಣಕ್ಕೆ 2,50,000-00 ರೂ ಹಣ ಬಡ್ಡಿ ನೀಡಿದ್ದು ನಂತರ ಕಂಪೆನಿ ಮುಚ್ಚಿದ್ದು 2024 ರ ಸೆಪ್ಟೆಂಬರ್ ತಿಂಗಳಲ್ಲಿ ರೋಹಿತ್ ಪಿರ್ಯಾದುದಾರರನ್ನು ಮತ್ತೆ ಸಂಪರ್ಕಿಸಿ ತನಗೆ ಕಂಪೆನಿಯಿಂದ ಹೂಡಿಕೆ ಮಾಡಿದವರಿಗೆ ಹಣ ಕೊಡಲು ದೊಡ್ಡ ಮೊತ್ತದ ಹಣ ನೀಡಿದ್ದಾರೆ ಹಣವನ್ನು ಕೊಡುವ ಪ್ರಕ್ರಿಯೆಗೆ ಹಣ ಖರ್ಚಾಗುತ್ತದೆ ಎಂದುಮತ್ತು ಆದಾಯ ತೆರಿಗೆ ಅಧಿಕಾರಿಯವರಿಗೆ ಕೊಡಲು ಇದೆ ಎಂದು ಅವರ ಚಾಲಕರಾದ ಹಾಗರಾಜ ಹಾಗೂ ಜಗದೀಶರವರ ಖಾತೆಗೆ ಮತ್ತು ತನ್ನ ತಮ್ಮನಾದ ಪ್ರದೀಪನಿಗೆ ಹಣ ಹಾಕುವಂತೆ ಹೇಳಿ ಮೋಸ ಮಾಡುವಉದ್ದೇಶದಿಂದ ಹೆಚ್ಚಿನ ಹಣ ಕೊಡುವುದಾಗಿ ಆಮಿಷ ತೋರಿಸಿ ನಂಬಿಸಿ ಪಿರ್ಯಾದುದಾರರಿಂದ ದಿನಾಂಕ: 17/09/2024 ರಿಂದ ದಿನಾಂಕ: 05/06/2025 ರವರೆಗೆ ಹಂತ ಹಂತವಾಗಿ ಒಟ್ಟು 31,58,452-00 ರೂ ಹಣವನ್ನು ಪೋನ್ ಪೇ ಹಾಗೂ ಗೂಗಲ್ ಪೆ, ಹಾಗೂ ನೆಪ್ಟ್ ಬ್ಯಾಂಕಿಂಗ್ ಮೂಲಕ ಹಾಕಿಸಿಕೊಂಡು ಹಣವನ್ನು ವಾಪಾಸು ಕೊಡದೆ ಕೇಳಿದಾಗ ಬೆದರಿಕೆ ಹಾಕಿ ನಂತರ ಸಂಪರ್ಕಕ್ಕೆ ಸಿಗದೆ ನಂಬಿಕೆ ದ್ರೋಹ ಎಸಗಿ ಮೋಸ ಮಾಡಿರುತ್ತಾರೆ.
ಈ ಬಗ್ಗೆ ಆಪಾದಿತ 1. ರೋಹಿತ್ 2. ಪ್ರದೀಪ 3. ಲಕ್ಷ್ಮೀ 4. ನಾಗರಾಜ 5. ಜಗದೀಶ ಇವರುಗಳ ವಿರುದ್ದ ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 39/2025 ಕಲಂ: 316(2), 318(4)351(2)351(3) 190 BNS ನಂತೆ ಪ್ರಕರಣ ದಾಖಲಾಗಿರುತ್ತದೆ.