Home Crime ಪುಟ್‌ ಪಾತ್‌ನಲ್ಲಿ ನಡೆದುಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರಿಗೆ ಬಸ್ ಢಿಕ್ಕಿ ಹೊಡೆದು ಮೃತ್ಯು…!!

ಪುಟ್‌ ಪಾತ್‌ನಲ್ಲಿ ನಡೆದುಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರಿಗೆ ಬಸ್ ಢಿಕ್ಕಿ ಹೊಡೆದು ಮೃತ್ಯು…!!

ಹೆಬ್ರಿ : ಉಡುಪಿ ಜಿಲ್ಲೆಯ ಹೆಬ್ರಿ‌ ಸಮೀಪ ಪುಟ್‌ ಪಾತ್‌ನಲ್ಲಿ ನಡೆದುಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರಿಗೆ ಬಸ್ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟವರು ಶಂಕರ ಎಂದು ತಿಳಿದು ಬಂದಿದೆ.

ಶೋಬಿತ್‌ ಬಸ್ಸಿನ ಚಾಲಕನು ಬಸ್ಸನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಶಂಕರ್ ಎಂಬವರಿಗೆ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ಮಾಡಿದರು ಪರಿಶೀಲನೆ ನಡೆಸಿದ್ದಾರೆ.

ಪ್ರಕರಣ ವಿವರ : ಪಿರ್ಯಾದಿದಾರರಾದ ಸುನೀಲ್‌ (49), ಹೆಬ್ರಿ ಇವರು ದಿನಾಂಕ 11/06/2025 ರಂದು ಸಂಜೆ ಸಮಯ ಹೆಬ್ರಿಯ ಪೇಟೆಯಲ್ಲಿರುವ ಬಡಕ್ಕಿಲ್ಲಾಯ ಹೋಟೆಲ್‌ಗೆ ಚಾ ಕುಡಿಯಲು ಹೋಗಿದ್ದು ಹೋಟೆಲ್‌ನಲ್ಲಿ ಚಾ ಕುಡಿದು ಹೊರಗೆ ಬರುವಾಗ ಸಮಯ 3:30 ಗಂಟೆಗೆ ಶಿವಮೊಗ್ಗ ಕಡೆಯಿಂದ KA-14-B-4118 ಶೋಬಿತ್‌ ಬಸ್ಸಿನ ಚಾಲಕನು ಬಸ್ಸನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆ ತೀರಾ ಎಡ ಭಾಗಕ್ಕೆ ಚಲಾಯಿಸಿಕೊಂಡು ಬಂದು ಎದುರಿನಿಂದ ಹೆಬ್ರಿ ಜಂಕ್ಷನ್‌ ಕಡೆಯಿಂದ ರಸ್ತೆ ಬಲ ಬದಿಯಲ್ಲಿ ಪುಟ್‌ ಪಾತ್‌ನಲ್ಲಿ ನಡೆದುಕೊಂಡು ಬರುತ್ತಿದ್ದ ಪಿರ್ಯಾದಿದಾರರು ವಾಸ ಇರುವ ಪ್ಲಾಟ್‌ ನಲ್ಲಿ ವಾಸವಾಗಿರುವ ಶಂಕರ (71) ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಶಂಕರ ರವರು ಮಣ್ಣು ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರು ಓಡಿ ಹೋಗಿ ಅವರನ್ನು ಎತ್ತಿ ನೋಡಲಾಗಿ ಶಂಕರ ರವರ ಹಣೆಗೆ ರಕ್ತಗಾಯವಾಗಿದ್ದು ಹಾಗೂ ಅವರು ಹೊಟ್ಟೆಯ ಭಾಗವನ್ನು ಹಿಡಿದುಕೊಂಡಿದ್ದರು ಅಪಘಾತಗೊಳಿಸಿದ ಬಸ್ಸಿನ ಚಾಲಕ ಬಸ್ಸನ್ನು ನಿಲ್ಲಿಸಿ ಅಪಘಾತವಾದ ಸ್ಥಳಕ್ಕೆ ಬಂದಿದ್ದು ಬಸ್ಸಿನ ನಂಬ್ರ ನೋಡಲಾಗಿ KA-14-B-4118 ನೇ ಶೋಬಿತ್‌ ಬಸ್ಸು ಆಗಿದ್ದು ಅದರ ಚಾಲಕನ ಹೆಸರು ಶಬರೀಷ ಎಂಬುದಾಗಿ ತಿಳಿಯಿತು.

ನಂತರ ಕೂಡಲೇ ಪಿರ್ಯಾದಿದಾರರು ಹಾಗೂ ಹಾಗೂ ಅಲ್ಲಿ ಸೇರಿದವರು ಶಂಕರ ರವರನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಹೆಬ್ರಿ ಹೆಲ್ತ್‌ ಕೇರ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿದ್ದು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಶಂಕರ ರವರು ಚಿಕಿತ್ಸೆಗೆ ಸ್ಪಂದಿಸದೆ ಸಂಜೆ 7:12 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2025 ಕಲಂ:281, 106 BNS ರಂತೆ ಪ್ರಕರಣ ದಾಖಲಾಗಿರುತ್ತದೆ.