ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಟಿಪ್ಪರ್ ನಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿರುವಾಗ ಪೊಲೀಸರು ಚಾಲಕನನ್ನು ಟಪ್ಪರ್ ಸಹಿತ ಬಂಧಿಸಿದ್ದಾರೆ.
ಬಂಧಿತ ಆರೋಪಿ ಸೋಮಪ್ಪ ಎಂದು ತಿಳಿಯಲಾಗಿದೆ.
ಬಂಧಿತ ಆರೋಪಿ ಬಳಿ ಇದ್ದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ: ದಿನಾಂಕ 07/06/2025 ರಂದು ನಂಜಾನಾಯ್ಕ್ ಎನ್ ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಪೊಲೀಸ್ ಠಾಣೆ ಇವರು ಕುಂದಾಪುರ ತಾಲೂಕು ಗೋಪಾಡಿ ಗ್ರಾಮದ ಶಾಂತಿನಗರ ಜಂಕ್ಷನ್ ನ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ವಕ್ವಾಡಿ ಕಡೆಯಿಂದ KA 19 AA 9930ನೇ ಟಿಪ್ಪರ್ ನಿಲ್ಲಿಸಿ ಅದನ್ನು ಪರಿಶೀಲಿಸಿದಾಗ ಅದರಲ್ಲಿ ಕೆಂಪು ಕಲ್ಲು ಇರುವುದು ಕಂಡು ಬಂದಿದ್ದು, ಸದ್ರಿ ಟಿಪ್ಪರ ವಾಹನದ ಚಾಲಕನಾದ ಸೋಮಪ್ಪ ರವರನ್ನು ವಶಕ್ಕೆ ಪಡೆದು ಕೆಂಪು ಕಲ್ಲಿನ ಬಗ್ಗೆ ವಿಚಾರಿಸಲಾಗಿ ಬಜ್ಪೆ ಹತ್ತಿರದ ಸುಂಕಲಪದವು ದಿವೇಶ್ ರವರ ಜಾಗದಲ್ಲಿರುವ ಕಲ್ಲು ಕೋರೆಯಿಂದ 450 ಕೆಂಪು ಕಲ್ಲುಗಳನ್ನು ತುಂಬಿಸಿಕೊಂಡು ಬಂದಿರುವುದಾಗಿ ತಿಳಿಸಿರುತ್ತಾನೆ. ಆಪಾದಿತರು ಸಂಘಟಿತರಾಗಿ ಯಾವುದೇ ಪರವಾನಿಗೆ ಇಲ್ಲದೇ ಕೆಂಪು ಕಲ್ಲನ್ನು ಕಳವು ಮಾಡಿ ಸಾಗಾಟ ಮಾಡಿರುವುದು ಕಂಡುಬಂದಿದ್ದು, ಸದ್ರಿ ವಾಹನದಲ್ಲಿದ್ದ ಕೆಂಪು ಕಲ್ಲಿನ ಅಂದಾಜು ಮೌಲ್ಯ 19,000 ಮತ್ತು KA 19 AA 9930 ನೇ ಟಿಪ್ಪರ್ ವಾಹನದ (ಅಂದಾಜು ಮೌಲ್ಯ-5,00,000/-)ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 71/2025 ಕಲಂ: 303(2), 112 BNS & ಕಲಂ: 4, 4(1) (a), 21 Mines and minerals Regulation of development act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಪ್ರಕರಣದ ಆರೋಪಿಯಾದ ಸೋಮಪ್ಪ (35), ತಂದೆ: ಶರಣಪ್ಪ, ಮುರಡಿ ಗ್ರಾಮ, ಇಳಕಲ್ ಬಾಗಲಕೋಟೆ ದಸ್ತಗಿರಿ ಮಾಡಲಾಗಿದೆ.

