ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ವ್ಯಕ್ತಿಯೊಬ್ಬರು ಪರವಾನಿಗೆ ಇಲ್ಲದ ಕೆಂಪು ಕಲ್ಲನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಮಿನಿ ಟಿಪ್ಪರ್ ಸಹಿತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಟಿಪ್ಪರ್ ಚಾಲಕ ಸಚ್ಚಿದಾನಂದ ಎಂದು ಗುರುತಿಸಲಾಗಿದೆ.
ಘಟನೆ ವಿವರ: ದಿನಾಂಕ 06/06/2025 ರಂದು ಕುಂದಾಪುರ ತಾಲೂಕು ಗೋಪಾಡಿ ಗ್ರಾಮದ ಶಾಂತಿನಗರ ಜಂಕ್ಷನ್ನಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ವಕ್ವಾಡಿ ಕಡೆಯಿಂದ ಬರುತ್ತಿದ್ದ KA 20AA3057ನೇ 407 ಮಿನಿ ಟಿಪ್ಪರನ್ನು ಪರಿಶೀಲಿಸಿದಾಗ ಅದರಲ್ಲಿ ಕೆಂಪು ಕಲ್ಲು ಇರುವುದು ಕಂಡು ಬಂದಿದ್ದು ಸದ್ರಿ ಟಿಪ್ಪರ ವಾಹನದ ಚಾಲಕನಾದ ಸಚ್ಚಿದಾನಂದ ರವರನ್ನು ವಶಕ್ಕೆ ಪಡೆದು ಕೆಂಪು ಕಲ್ಲಿನ ಬಗ್ಗೆ ವಿಚಾರಿಸಲಾಗಿ ಮಂದರತಿಯ ಮರಿಯ ಪೂಜಾರಿ ಎಂಬವರ ಮನೆಯ ಅಂಗಳದಿಂದ ಸುಮಾರು 200 ಕೆಂಪು ಕಲ್ಲುಗಳನ್ನು ತುಂಬಿಸಿಕೊಂಡು ಬಂದಿರುವುದಾಗಿ ತಿಳಿಸಿರುತ್ತಾನೆ. ಆಪಾದಿತರು ಸಂಘಟಿತರಾಗಿ ಯಾವುದೇ ಪರವಾನಿಗೆ ಇಲ್ಲದೇ ಕೆಂಪು ಕಲ್ಲನ್ನು ಕಳವು ಮಾಡಿ ಸಾಗಾಟ ಮಾಡಿರುವುದಾಗಿದೆ, ಸದ್ರಿ ವಾಹನದಲ್ಲಿದ್ದ ಕೆಂಪು ಕಲ್ಲಿನ ಅಂದಾಜು ಮೌಲ್ಯ 5000 ಮತ್ತು KA 20 AA 3057ನೇ 407 ಟಿಪ್ಪರ್ ವಾಹನದ (ಅಂದಾಜು ಮೌಲ್ಯ-2,00,000/-)ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 70/2025 ಕಲಂ: 303(2), 112 BNS & ಕಲಂ: 4, 4(1) (a), 21 Mines and minerals Regulation of development act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಪ್ರಕರಣದ ಆರೋಪಿಯಾದ ಸಚ್ಚಿದಾನಂದ (31), ತಂದೆ ಸಂಜೀವ, ಆಚಲಾಡಿ ಗ್ರಾಮ ಬ್ರಹ್ಮಾವರ ದಸ್ತಗಿರಿ ಮಾಡಲಾಗಿದೆ.

