ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತರುವಾಗ ಮಾಹಿತಿ ಮೇರೆಗೆ ಬೈಂದೂರು ಪೊಲೀಸರು ದಾಳಿ ನಡೆಸಿ ಐದು ಮಂದಿಯನ್ನು ಬಂಧಿಸಿದ್ದಾರೆ.
5 ಹುಂಜಗಳನ್ನು ಮತ್ತು ಕೋಳಿ ಅಂಕ ಬಳಸಿದ ನಗದು ಸಹಿತ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣ ವಿವರ : ದಿನಾಂಕ 0606.2025 ರಂದು ಬಿಜೂರು ಗ್ರಾಮ ಬಲವಾಡಿ ನವೋದಯ ಕಾಲೋನಿ ಸಮೀಪದ ಸರಕಾರಿ ಹಾಡಿ ಸಾರ್ವಜನಿಕ ಸ್ಥಳದಲ್ಲಿ ಕೋಳಿಗಳ ಕಾಲಿಗೆ ಹರಿತವಾದ ಬಾಳು ಕಟ್ಟಿ ಕೋಳಿ ಅಂಕ ನಡೆಸುತ್ತಿದ್ದಾರೆ ಎಂದು ಮಾಹಿತಿ ಪಡೆದ ಪಿಎಸ್ ಐ ಬೈಂದೂರು ತಿಮ್ಮೇಶ್ ಬಿ ಎನ್ ರವರು ಕೋಳಿ ಅಂಕ ನಡೆಯುತ್ತಿರುವ ಸ್ಥಳಕ್ಕೆ ದಾಳಿ ಮಾಡಿ, ಕೋಳಿ ಅಂಕದಲ್ಲಿ 1) ಜಯದೀಪ ಖಾರ್ವಿ(29), ತಂದೆ : ಬಾಬು ಖಾರ್ವಿ, ಕಿರಿಮಂಜೇಶ್ವರ
2)ಮಧುಕರ ದೇವಾಡಿಗ(34), ತಂದೆ : ವೆಂಕಟ್ರಮಣ ದೇವಾಡಿಗ ಬಿಜೂರು. 3) ಹೆರಿಯಣ್ಣ ಪೂಜಾರಿ(42), ತಂದೆ : ಅಣ್ಣಪ್ಪ ಪೂಜಾರಿ 4)ಸೋಮಶೇಖರ(38), ತಂದೆ : ಮಂಜುನಾಥ ದೇವಾಡಿಗ, ಬಿಜೂರು. 5) ರಾಘವೇಂದ್ರ ದಾಸ್(30) ತಂದೆ: ಗೋವಿಂದ, ಕಾಲ್ತೋಡು 6)ಕೃಷ್ಣದಾಸ್ ಉಪ್ಪುಂದ 7)ಚಂದ್ರ ಮರವಂತೆ 8) ಅಶೋಕ ಗಾಣಿಗ ಶಾಲೆಬಾಗಿಲು ಉಪ್ಪುಂದ 9) ಸೀತಾರಾಮ ಕುಲಾಲ ಮೆಟ್ಟಿನಹೊಳೆ ಕಾಲ್ತೋಡು , 10) ರಾಘವೇಂದ್ರ, ಹರಿಕೆರೆ 11)ಮಹೇಶ್ ದೇವಾಡಿಗ, ಬಿಜೂರು 12) ಪಾಂಡುರಂಗ ದೇವಾಡಿಗ, 13) ನದಿಕಂಠ ಉಪ್ಪುಂದ ಹಾಗೂ ಇತರರು ನಿರತರಾಗಿದ್ದು, ಸ್ಥಳದಿಂದ ಓಡಿ ಹೋಗುತ್ತಿದ್ದವರಲ್ಲಿ 5 ಮಂದಿಯನ್ನು ವಶಕ್ಕೆ ಪಡೆದುಕೊಂಡು 5 ಕೋಳಿ ಹುಂಜಗಳನ್ನು ಹಾಗೂ ಕೋಳಿ ಅಂಕಕ್ಕೆ ಪಣವಾಗಿಟ್ಟ 1490/- ಮತ್ತು 2 ಹರಿತವಾದ ಕೋಳಿ ಬಾಳು ಮತ್ತು 2 ದಾರಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 117/2025 ಕಲಂ 11(1)A, ಪ್ರಾಣಿ ಹಿಂಸೆ ನಿಷೇದ ಕಾಯಿದೆ ಮತ್ತು 87,93 ಕರ್ನಾಟಕ ಪೊಲೀಸ್ ಕಾಯಿದೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.







