ಗುಂಡ್ಲುಪೇಟೆ : ಕೇರಳಕ್ಕೆ ಅಕ್ರಮ ಬಿಳಿಕಲ್ಲು ಸಾಗಣೆ ವೇಳೆ 91620 ರೂ ದಂಡದ ಬಿಸಿ ಮುಟ್ಟಿಸಿದ್ದಾರೆ. ಮದ್ದೂರು ಚೆಕ್ ಪೋಸ್ಟ್ ಬಳಿ ತಪಾಸಣೆ ವೇಳೆ ವಂಚನೆ ಬೆಳಕಿಗೆ ಬಂದಿದೆ. ಕೆ ಎಲ್ 08 ಸಿಎ 0331 ನೋಂದಣಿ ಟಿಪ್ಪರಿಗೆ 91620 ದಂಡ ಮತ್ತೊಂದು ಟಿಪ್ಪರ್ ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ಅನುಮತಿಯಿಲ್ಲದ ಕೆ ಎಲ್ 42 ಟಿ 8343 ನೋಂದಣಿಯ ಮತ್ತೊಂದು ಟಿಪ್ಪರ್ ಪೊಲೀಸ್ ಸುಪರ್ದಿಗೆ ಪಡೆದಿದ್ದು, ಅನುಮತಿ ಇಲ್ಲದೆ ಗಡಿಭಾಗಕ್ಕೆ ಟಿಪ್ಪರ್ಗಳು ಬರ್ತಿರೋದಾದ್ರು ಹೇಗೆ ?. ರಾಯಲ್ಟಿ , ಪರ್ಮಿಟ್ ಇಲ್ಲದೆ ಸಂಚರಿಸುವ ಟಿಪ್ಪರ್ಗಳಿಗೆ ಬೆಂಬಲ ಕೊಡಿರೋದಾದ್ರು ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಪ್ರತಿನಿತ್ಯ ಸರ್ಕಾರಕ್ಕೆ ರಾಜಧನ ಕೇರಳ ಉದ್ಯಮಿಗಳು ವಂಚಿಸುತ್ತಿದ್ದಾರೆ. ಅನುಮತಿಯಿಲ್ಲದೆ ಎಂಸ್ಯಾನ್ಡ್ ಬಿಳಿ ಕಲ್ಲು ಸಾಗಣೆ ಮಾಡೋ ದಂಧೆ ಫುಲ್ ಆಕ್ಟಿವ್ ಆಗಿದೆ. ಪ್ರತಿನಿತ್ಯ ಗಡಿಭಾಗದಿಂದ ಕೇರಳ ರಾಜ್ಯಕ್ಕೆ ಖನಿಜ ಸಂಪತ್ತು ರವಾನೆಯಾಗುತ್ತಿದೆ. ಅಕ್ರಮದಲ್ಲಿ ತೊಡಗಿರುವ ಟಿಪ್ಪರ್ ಗಳಿಗೆ ಪ್ರವೇಶವಕಾಶ ಸಿಗುತ್ತಿದೆಯೇ ?. ಗಡಿಯಲ್ಲಿ ಗಣಿ ಇಲಾಖೆ ಸರಿಯಾಗಿ ತಪಾಸಣೆ ಮಾಡ್ತಿಲ್ಲವೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.