ಕುಂದಾಪುರ: ತ್ರಾಸಿ ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘ (ನಿ) ಹಾಗೂ ಮಹಾಸಭೆ ಕಾರ್ಯಕ್ರಮ ತ್ರಾಸಿ ಕೊಂಕಣ ಖಾರ್ವಿ ಸಮಾಜದ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಹಕಾರ ಸಂಘದ ನಿರ್ದೇಶಕ ರಾಜು ಪೂಜಾರಿ ಯವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘ (ನಿ) ಇದರ ಸಂಸ್ಥಾಪಕ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಭಾಸ್ಕರ್ ಬಿಲ್ಲವ ರವರು ಮಹಿಳಾ ಸಂಘದ ಸದಸ್ಯರ ಮಕ್ಕಳ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ದೇಶಿಸಿ ಮಾತನಾಡಿ ನಮ್ಮ ಎಲ್ಲಾ ಸಂಘದ ಸದಸ್ಯರ ವಾರ್ಷಿಕ ಆದಾಯ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅತಿ ಉನ್ನತ ಮಟ್ಟದ ಸೌಲಭ್ಯ ಕೊಡಬೇಕು ಎಂಬ ಉದ್ದೇಶದಿಂದ ಶ್ರೀ ಸಾಯಿ ಗ್ರಾಮೀಣಭಿವೃದ್ಧಿ ಟ್ರಸ್ಟ್ ಜೊತೆಗೂಡಿ ಸತತ ಒಂಬತ್ತು ವರ್ಷಗಳಿಂದ ನಿರಂತರ ಇಂತಹ ಪುಣ್ಯದ ಕಾರ್ಯ ಮಾಡುತ್ತಾ ಬಂದಿದ್ದೇವೆ ಮುಂದೆಯೂ ಸಹ ನಿಮ್ಮ ಸಹಕಾರ ಆಶೀರ್ವಾದ ನಮ್ಮ ಸಂಸ್ಥೆಯ ಮೇಲೆ ಇರಲಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜು ಪೂಜಾರಿ ಅವರು ಮಾತನಾಡಿ ಬಹಳ ಕಡಿಮೆ ಸಮಯದಲ್ಲಿ ಈ ಸಂಸ್ಥೆಯು ದೊಡ್ಡ ಮಟ್ಟದಲ್ಲಿ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಮೆಚ್ಚುಗೆ ಪಡೆದಿದೆ ಇನ್ನು ಮುಂದೆಯೂ ಹೀಗೆ ನಿರಂತರ ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತೀಶ್ ಕುಮಾರ್ LIC ಯವರು ಮಾತನಾಡಿ ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘದ ಜೊತೆ ನಾವಿದ್ದೇವೆ ಈ ಸಂಸ್ಥೆಯು ಇನ್ನಷ್ಟು ದೊಡ್ಡ ಮಟ್ಟದ ಅಭಿವೃದ್ಧಿ ಹೊಂದಲಿ ಸಂಸ್ಥೆಯು ದೊಡ್ಡ ಮಟ್ಟದಲ್ಲಿ ಬೆಳೆದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಡೆಯುವಂತಾಗಲಿ ಎಂದು ಶುಭ ಹಾರೈಸು.
ಸಹಕಾರ ಸಂಘದ ತಾಲೂಕು ಅಧ್ಯಕ್ಷರಾದ ಉದಯ್ ಕುಮಾರ್ ಹಟ್ಟಿ ಅಂಗಡಿ ಮಾತನಾಡಿ ಮಹಿಳೆಯರು ಸಾಲ ಪಡೆಯುವ ಮುಂಚೆ ಯೋಚನೆ ಮಾಡಬೇಕು, ಒಂದು ಕಡೆ ಸಾಲ ಮಾಡಿದರೆ ತೊಂದರೆ ಇಲ್ಲ ಸಾಲ ಸಿಗುತ್ತದೆ ಎಂದು ಮೂರು ನಾಲ್ಕು ಸಂಘದಲ್ಲಿ ಸಾಲ ಮಾಡಿದರೆ ಮುಂದೊಂದು ದಿನ ಕಾಲವೇ ಸೂಲವಾಗಿ ಪರಿಣಮಿಸುತ್ತದೆ ಸಾಲ ಪಡೆಯುವ ಮುನ್ನವೇ ಜಾಗೃತರಾಗಬೇಕು ಎಂದು ಕಿವಿಮಾತು ಹೇಳಿದರು.
240 ಹೆಚ್ಚು ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಬ್ಯಾಗ್ ವಿತರಣೆ, ಪ್ರತಿಭಾ ಪುರಸ್ಕಾರ, ಅತಿ ಅದ್ದೂರಿಯಾಗಿ ನಡೆಯಿತು
ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ ಮದನ್ ಕುಮಾರ್ ಈ ಸಂಸ್ಥೆಯ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲಲಿ ಎಂದು ಶುಭ ಸಹನೆ ಗೈದರು
ಕಾನೂನು ಸಲಹೆ ಮತ್ತು ಮಹಾಸಭೆಯ ವಾರ್ಷಿಕ ವರದಿಯು ಸಭೆಯಲ್ಲಿ ಮಂಡನೆ ಮಾಡಲಾಯಿತು.


