ಕಾರ್ಕಳ : ನಗರದದ ಶಿರ್ಲಾಲು ಭಾಗದಲ್ಲಿ ಆನೆ ಸಂಚಾರ ಮಾಡುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಶಿರ್ಲಾಲುವಿನ ಹಾಡಿಯಂಗಡಿ ಆಯೆರೆ ಮನೆ ಧರ್ಮರಾಜ್ ಹೆಗ್ಡೆಯವರ ಕೃಷಿ ತೋಟಕ್ಕೆ ರಾತ್ರಿ ಆನೆ ನುಗ್ಗಿ ಹಲವಾರು ಕೃಷಿ ಹಾಳು ಮಾಡಿದೆ.
ಇದೇ ಪರಿಸರದ ಹಾರಡಿ ಹಾಗೂ ಸುತ್ತ ಮುತ್ತಲಿನ ಅರಣ್ಯದಲ್ಲಿ ಈ ಆನೆ ಸಂಚಾರ ಮಾಡುತ್ತಿದೆ. ಕಳೆದ ಹಲವಾರು ತಿಂಗಳಿನಿಂದ ಕಬ್ಬಿನಾಲೆ ಅರಣ್ಯದಲ್ಲಿ ಆನೆ ಸಂಚಾರ ಮಾಡಿತ್ತು.
ಶಿರ್ಲಾಲುನಲ್ಲಿ ಅಡಿಕೆ ಹಾಗೂ ಬಾಳೆ ಗಿಡಗಳನ್ನು ಆನೆಗಳು ಹಾಳು ಮಾಡಿವೆ.
ಅರಣ್ಯ ಇಲಾಖೆ ಈ.ಬಗ್ಗ್ಗೆ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ

