Home Crime ಸ್ಕೂಟಿ ಕಾರಿಗೆ ಢಿಕ್ಕಿ : ವ್ಯಕ್ತಿಯೊಬ್ಬರಿಗೆ ಇಬ್ಬರಿಂದ ಹಲ್ಲೆ…!!

ಸ್ಕೂಟಿ ಕಾರಿಗೆ ಢಿಕ್ಕಿ : ವ್ಯಕ್ತಿಯೊಬ್ಬರಿಗೆ ಇಬ್ಬರಿಂದ ಹಲ್ಲೆ…!!

ಕೋಟ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ವ್ಯಕ್ತಿಯೊಬ್ಬರ ಸ್ಕೂಟಿ ಕಾರೊಂದಕ್ಕೆ ಢಿಕಿ ಹೊಡೆದಿದೆ, ಆ ಕಾರಣಕ್ಕಾಗಿ ಕಾರಿನಲ್ಲಿದ್ದ ಇಬ್ಬರು ಹಲ್ಲೆ ನೆಡೆಸಿದ ಘಟನೆ ನಡೆದಿದೆ.

ಹಲ್ಲೆಗೊಳಾಗದ ವ್ಯಕ್ತಿ ಉದಯ ಎಂದು ತಿಳಿದು ಬಂದಿದೆ.

ಹಲ್ಲೆ ಮಾಡಿದ ಆರೋಪಿ ಸಂತೋಷ ಹಾಗೂ ಸುಬ್ಬ ಎಂದು ತಿಳಿದು ಬಂದಿದೆ.

ಕೋಟ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿ, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣ ವಿವರ: ಪಿರ್ಯಾದಿ ಹೇಮಾ (32) ಆವರ್ಸೆ ಗ್ರಾಮ, ಬ್ರಹ್ಮಾವರ ತಾಲೂಕು ಇವರ ಗಂಡ ಉದಯ ರವರು ದಿನಾಂಕ 11.06.2025 ರಂದು ಕೆಲಸ ಮುಗಿಸಿ ಸಂಜೆ 05.30 ಗಂಟೆ ಸುಮಾರಿಗೆ ಮನೆಗೆ ಬರುತ್ತಿರುವಾಗ ಶಿರೂರು ಮೂರ್‌ ಕೈ ಹಾಲು ಡೈರಿಯ ಬಳಿ ಕಾರೊಂದು ಒಮ್ಮೇಲೆ ರಸ್ತೆಗೆ ಬಂದ ಕಾರಣದಿಂದ ಪಿರ್ಯಾದಿದಾರರ ಗಂಡ ಚಲಾಯಿಸುತ್ತಿದ್ದ ಸ್ಕೂಟಿ KA20HE1572 ಇದು ಕಾರಿಗೆ ತಾಗಿದ್ದು, ಪಿರ್ಯಾದಿದಾರರ ಗಂಡ ಸ್ಕೂಟಿಯನ್ನು ನಿಲ್ಲಿಸಿ ಹಿಂದೆ ನೋಡಿದ್ದು, ಅದೇ ಕಾರಣಕ್ಕೆ ಕಾರು ನಂಬ್ರ KA 04 MN 3334 ರಲ್ಲಿದ್ದ ಆರೋಪಿಗಳಾದ ಸಂತೋಷ ಮತ್ತು ಸುಬ್ಬ ಇವರು ಕಾರಿನಿಂದ ಇಳಿದು ಹಿಂದೆ ತಿರುಗಿ ನೋಡುವುದೇಕೆ ಎಂದು ಬೈದು ಕೈಯಿಂದ ಹೊಡೆದಿರುತ್ತಾರೆ ಎಂದು ಪಿರ್ಯಾದಿದಾರರ ಗಂಡ ಮನೆಗೆ ಬಂದು ಪಿರ್ಯಾದಿದಾರರಿಗೂ ಹಾಗೂ ಗಂಡನ ತಮ್ಮ ಗಣೇಶ ನಿಗೂ ತಿಳಿಸಿದ್ದು ಗಣೇಶ ನು ಸಂತೋಷ ನಿಗೆ ಕರೆ ಮಾಡಿ ಯಾಕೆ ಅಣ್ಣನಿಗೆ ಹೊಡೆದಿದ್ದು ಎಂದು ಕೇಳಿದ್ದು ಆಗ ಮಾತಿನ ಚಕಮಕಿ ನಡೆದು ಸಂತೋಷನು ಅಲ್ಲಿಗೆ ಬರುವುದಾಗಿ ತಿಳಿಸಿರುತ್ತಾನೆ. ಸಂಜೆ 06.00 ಗಂಟೆ ಸುಮಾರಿಗೆ ಸಂತೋಷ ಮತ್ತು ಸುಬ್ಬನು ಕಾರಿನಲ್ಲಿ ಪಿರ್ಯಾದಿದಾರರ ಮನೆಯ ಮನೆ ಬಳಿ ಇರುವ ಕಲ್ಲು ಕೊರೆಯ ಬಳಿ ಬಂದಿದ್ದು ಆಗ ಅಲ್ಲಿದ್ದ ಪಿರ್ಯಾದಿದಾರರ ಗಂಡ ಉದಯ ಹಾಗೂ ಮೈದುನ ಗಣೇಶ ಇವರಿಗೆ ಹಲ್ಲೆ ನಡೆಸಿರುತ್ತಾರೆ. ಈ ಗಲಾಟೆಯನ್ನು ಬಿಡಿಸಲು ಹೋದ ಪಿರ್ಯಾದಿದಾರಿಗೂ ಸಂತೋಷನು ಕೈಯಿಂದ ಹಲ್ಲೆ ನಡೆಸಿದ್ದು ಅವಾಚ್ಯ ಶಬ್ದಗಳಿಂದ ಬೈದು ಸಂತೋಷನು ಕಾರಿನಲ್ಲಿದ್ದ ಕಬ್ಬಿಣದ ರಾಡ್‌ ನಿಂದ ಪಿರ್ಯಾದಿದಾರರ ಗಂಡ ಉದಯನಿಗೆ ಹಲ್ಲೆ ಮಾಡಿರುತ್ತಾನೆ. ಅಲ್ಲದೇ ಮುಂದಕ್ಕೂ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 114/2025 ಕಲಂ:, 115(2), 118, 352, 351(2)ಜೊತೆಗೆ 3(5) BNS ನಂತೆ ಪ್ರಕರಣ ದಾಖಲಾಗಿರುತ್ತದೆ.