Home Crime ಕಾರ್ಕಳ : ಅವಮಾನ ತಡೆಯಲಾರದೆ ವ್ಯಕ್ತಿಯೊಬ್ಬರು ಆತ್ಮಹತ್ಯೆ…!!

ಕಾರ್ಕಳ : ಅವಮಾನ ತಡೆಯಲಾರದೆ ವ್ಯಕ್ತಿಯೊಬ್ಬರು ಆತ್ಮಹತ್ಯೆ…!!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದ ಸಮೀಪ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಸಾವನ್ನಪ್ಪಿದವರು ಮುಂಡ್ಕೂರು ನಿವಾಸಿ ರಮೇಶ್ ಎಂದು ತಿಳಿದು ಬಂದಿದೆ.

“ನನ್ನ ತಂದೆ ರಮೇಶ್ ಅವರು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಅದರ ಮಾಲಿಕವ ತಂದೆಯನ್ನು ದುಡಿಸಿ ಸಂಬಳ ಕೊಡದೆ ಅವಮಾನ ಮಾಡಿದ್ದಾರೆ.ತಂದೆಯ ಸಾವಿಗೆ ಸುರೇಶ್ ಅವರೇ ನೇರ ಕಾರಣ” ಎಂದು ರಮೇಶ್ ಅವರ ಮಗ ಶರತ್ ಅವರು ಪೊಲೀಸರು ದೂರು ನೀಡಿದ್ದಾರೆ.

ಕಾರ್ಕಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ವಿವರ: ದಿನಾಂಕ 07/04/2025 ರಂದು ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದಲ್ಲಿ ರಮೇಶ್‌ (67) ರವರು ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟ ಬಗ್ಗೆ ಠಾಣಾ ಯು ಡಿ ಆರ್‌ ಸಂಖ್ಯೆ 14/2025 ರಂತೆ ಅಸಹಜ ಸಾವು ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ದಿನಾಂಕ 21/04/2025 ರಂದು ಈ ಪ್ರಕರಣದ ಪಿರ್ಯಾದುದಾರರಾದ ಶರತ್‌ ಯವರು ಠಾಣೆಗೆ ಹಾಜರಾಗಿ ತನ್ನ ತಂದೆ ಮೃತ ರಮೇಶ್‌ ಯವರು ಸಚ್ಚರಿಪೇಟೆಯ ರೀಕ್ಷಾ ಪಾರ್ಕ್ ಬಳಿ ಇರುವು ನ್ಯು ಸಾಯಿ ಕೃಪ ಹೊಟೇಲ್‌ ಮಾಲಕ ಸುರೇಶ್‌ ಯವರು ತನ್ನ ತಂದೆಯನ್ನು ದುಡಿಸಿ ಅವರ 56 ದಿನದ ಸಂಬಳ ನೀಡದೆ ಅವರು ಸಂಬಳ ಕೇಳಿದಾಗ ಪಿರ್ಯಾದುದಾರರ ತಂದೆಯ ಕಾಲರ್‌ ಹಿಡಿದು ಕೆನ್ನೆಗೆ ಹೊಡೆದು ಅವಾಚ್ಚ ಶಬ್ದಗಳಿಂದ ಬೈದು ಅವರನ್ನು ದೂಡಿಹಾಕಿ ಎಲ್ಲರ ಎದುರಿಗೆ ಅವಮಾನ ಮಾಡಿದ್ದು ಈ ಅವಮಾನವನ್ನು ತಡಿಯಲಾಗದೆ ತನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ತನ್ನ ತಂದೆ ಆತ್ಮಹತ್ಯೆ ಮಾಡಿಕೊಳ್ಳಲು ಸುರೇಶ್‌ ಯವರೆ ನೇರ ಕಾರಣ ಎಂಬುದಾಗಿ ದೂರು ನೀಡಿದ್ದು ಸದ್ರಿ ದೂರಿನ ಅನ್ವಯ ಮಾನ್ಯ ಘನ ನ್ಯಾಯಾಲಯಕ್ಕೆ ಪ್ರಕರಣ‌ ದಾಖಲಿಸಿ ತನಿಖೆ ನಡೆಸಲು ಅನುಮತಿ ಕೋರಿದ್ದು ಮಾನ್ಯ ಘನ ನ್ಯಾಯಾಲಯವು ತನಿಖೆ ನಡೆಸಿ ನಂತರ ಎಫ್‌ ಐ ಆರ್‌ ದಾಖಲಿಸಿ ಅಂತಿಮ ವರದಿ ಸಲ್ಲಿಸುವಂತೆ ನ್ಯಾಯಾಲಯದ ಆದೇಶವನ್ನು ಸ್ವೀಕರಿಸಿ ಸದ್ರಿ ಯು ಡಿ ಆರ್‌ ಪ್ರಕರಣದ ಪ್ರಾಥಮಿಕ ತನಿಖೆ ಮುಂದುವರೆಸಿ ಎಫ್‌ ಐ ಆರ್‌ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 71/2025 ಕಲಂ: 108 ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.