Home Crime ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನ ಎನ್ ಐ ಎಗೆ ವಹಿಸುವಂತೆ ಬಿಜೆಪಿ ನಿಯೋಗ ಆಗ್ರಹ…!!

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನ ಎನ್ ಐ ಎಗೆ ವಹಿಸುವಂತೆ ಬಿಜೆಪಿ ನಿಯೋಗ ಆಗ್ರಹ…!!

ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನ ಎನ್ ಐ ಎಗೆ ವಹಿಸುವಂತೆ ಬಿಜೆಪಿ ನಿಯೋಗ ಆಗ್ರಹಿಸಿದ್ದು, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ರನ್ನು ಬಿಜೆಪಿ ನಿಯೋಗ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಸಕ ಸುನೀಲ್ ಕುಮಾರ್ ನೇತೃತ್ವದಲ್ಲಿ ಭೇಟಿ ನೀಡಿದೆ.

ಜಿಲ್ಲೆಯ ಶಾಸಕರು, ಸಂಸದ ಹಾಗೂ ವಿವಿಧ ಮುಖಂಡರ ನೇತೃತ್ವದ ನಿಯೋಗ ಭೇಟಿ ಮಾಡಿದೆ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣವನ್ನ ಎನ್ ಐ ಎ ತನಿಖೆಗೆ ವಹಿಸುವಂತೆ ಆಗ್ರಹಿಸಿದರು.

ಭೇಟಿ ಬಳಿಕ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ ಸುನೀಲ್ ಕುಮಾರ್ ಹೇಳಿಕೆ ನೀಡಿದರು. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಸರಿಯಾಗಿ ಸಾಗುತ್ತಿಲ್ಲ. ಕಮಿಷನರ್ ಜೊತೆ ಜಿಲ್ಲೆಯ ಸಂಸದರು ಶಾಸಕರು ಸುಧೀರ್ಘ ಚರ್ಚೆ ನಡೆಸಿದ್ದೇವೆ. ಹತ್ಯೆಯ ಬಗ್ಗೆ ನಮ್ಮಲ್ಲಿರುವ ಅನುಮಾನಗಳನ್ನ ಹೇಳಿದ್ದೇವೆ.

ಈ ಪ್ರಕರಣವನ್ನ ಎನ್ ಐ ಎ ತನಿಖೆಗೆ ನೀಡಲೇಬೇಕು. ನಿಷೇಧಿತ ಪಿ ಎಫ್ ಐ ಕಾರ್ಯಕರ್ತರು ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ. ಸ್ಥಳೀಯ ಪೊಲೀಸರಿಂದ ಪ್ರಕರಣದ ತನಿಖೆ ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಒತ್ತಡಕ್ಕೆ ಮಣಿಯದೆ ಎನ್ ಐ ಎ ತನಿಖೆಗೆ ಕೊಡಬೇಕು ಎಂದು ಆಗ್ರಹಿಸಿದ್ದೇವೆ. ಕೇವಲ 8 ಜನ ಮಾತ್ರ ಅಲ್ಲ ನೇರವಾಗಿ ಕೈವಾಡವಿರುವ ಎಲ್ಲರನ್ನು ಬಂಧಿಸಬೇಕು.

ಹಂತಕರಿಗೆ ಆಶ್ರಯ,ವಾಹನ,ಹಣ ನೀಡಿದವರನ್ನ ಬಂಧಿಸಬೇಕು. ಹಣಕಾಸಿನ ನೆರವು ನೀಡಿದವರ ತನಿಖೆಯಾಗಬೇಕು. ಹಂತಕರಿಗೆ ಸಹಕಾರ ನೀಡಿದ ಬುರ್ಖಾಧಾರಿ ಮಹಿಳೆಯರ ಬಗ್ಗೆಯೂ ತನಿಖೆ ನಡೆಯಲಿ. ಪೊಲೀಸ್ ಇಲಾಖೆ ತನಿಖೆಯನ್ನ ಚುರುಕುಗೊಳಿಸಬೇಕು. ತನಿಖೆಯನ್ನ ಹಗುರವಾಗಿ ಪರಿಗಣಿಸಿದ್ರೆ ಬೀದಿಗಿಳಿದು ಪ್ರತಿಭಟಿಸುತ್ತೇವೆ ಎಂದರು.

ಪೊಲೀಸ್ ಇಲಾಖೆಗೆ ಮೂರು- ನಾಲ್ಕು ದಿನಗಳ ಗಡುವು ನೀಡುತ್ತೇವೆ. ನಾಳೆ ಎರಡು ಜಿಲ್ಲೆಯ ಶಾಸಕರು ಸೇರಿ ನಮ್ಮ ರಾಜ್ಯಾಧ್ಯಕ್ಷರು,ವಿಪಕ್ಷ ನಾಯಕರ ಜೊತೆ ರಾಜ್ಯಪಾಲರನ್ನ ಭೇಟಿಯಾಗಲಿದ್ದೇವೆ. ರಾಜ್ಯಪಾಲರನ್ನ ಭೇಟಿ ಮಾಡಿ ಎನ್ ಐ ಎ ಗೆ ನೀಡುವಂತೆ ಮನವಿ ಮಾಡುತ್ತೇವೆ ಈ ಪ್ರಕರಣದಲ್ಲಿ ಬಜ್ಪೆ ಪೊಲೀಸ್ ಕಾನ್ಸ್ಟೇಬಲ್ ಶಾಮೀಲು ಎಂದು ಆರೋಪಿಸಿದ್ದೇವೆ, ಅದರ ಬಗ್ಗೆಯೂ ಗಮನ ಸೆಳೆಯುತ್ತೇವೆ.

ಸುಹಾಸ್ ಶೆಟ್ಟಿ ಮೇಲೆ ಹೋರಾಟದ ಕಾರಣದಿಂದ ರೌಡಿ ಶೀಟರ್ ಬಿದ್ದಿದೆ. ನನ್ನ ಮೇಲೆ 20ಕ್ಕೂ ಅಧಿಕ ಕೇಸ್ ಇತ್ತು ಹಾಗೆಂದು ನಾವು ಕ್ರಿಮಿನಲ್ ಅಲ್ಲ. ಹೋರಾಟ ಮಾಡುವವರನ್ನೂ ಮರ್ಡರ್ ಮಾಡುವವರನ್ನೂ ಒಂದೆ ತಕ್ಕಡಿಯಲ್ಲಿಡಬಾರದು. ಇದು ಪ್ರೀ ಪ್ಲಾನ್ ಮರ್ಡರ್ ಎಲ್ಲರನ್ನು ತನಿಖೆಗೆ ಒಳಪಡಿಸಬೇಕು.

ಗೃಹ ಸಚಿವರು ಹತ್ಯೆ ನಡೆದ 6-7 ಗಂಟೆಗಳಲ್ಲೇ ಎನ್ ಐ ಎ ಗೆ ಕೊಡಲ್ಲ ಎಂದು ಹೇಳಾಕ್ಕಗಾಲ್ಲ. ಐ.ಬಿಯಲ್ಲಿ ಮುಸಲ್ಮಾನ್ ರು ಹೆದರಿಸಿದ್ದಕ್ಕೆ ಗೃಹ ಸಚಿವರು ಹೇಳೋದಲ್ಲ. ಐ.ಬಿ ನಲ್ಲಿ ಮುಸಲ್ಮಾನರು ಹೆದರಿಸಿದಕ್ಕೆ ಎನ್ಐ ಎ ಗೆ ಕೊಡಲು ಆಗಲ್ಲ ಎಂದು ಅವರು ಹೇಳ್ತಾರೆ. ಹಾಗೆಂದು ನಾವು ಸುಮ್ಮನೆ ಕೊರೋದಿಲ್ಲ. ಪೊಲೀಸ್ ಇಲಾಖೆಗೆ ಒಂದು ವಾರದ ಸಮಯ ನೀಡುತ್ತೇವೆ. ಇಲ್ಲವಾದಲ್ಲಿ ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದರು.