Home Crime ಕಾಪು: ಸ್ಕೂಟಿಗೆ ಕಾರು ಢಿಕ್ಕಿ : ಸವಾರ ಮೃತ್ಯು…!!

ಕಾಪು: ಸ್ಕೂಟಿಗೆ ಕಾರು ಢಿಕ್ಕಿ : ಸವಾರ ಮೃತ್ಯು…!!

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕಾಪು ಕೆ 1 ಜಂಕ್ಷನ್ ಬಳಿ ಸ್ಕೂಟಿಗೆ ಕಾರು ಢಿಕ್ಕಿ ಹೊಡೆದು ಸ್ಕೂಟಿ ಸವಾರ ಮೃತಪಟ್ಟ ಘಟನೆ ರವಿವಾರ (ಜು.12) ಸಂಜೆ ನಡೆದಿದೆ.

ಮೂಲತಃ ಸುರತ್ಕಲ್ ನಿವಾಸಿಯಾಗಿದ್ದು ಪ್ರಸ್ತುತ ಕಾಪುವಿನಲ್ಲಿ ನೆಲೆಸಿರುವ ಕಾಪು ಮಯ್ಯದ್ದಿ (76) ಮೃತ ಸ್ಕೂಟಿ ಸವಾರ.

ಕಾಪು ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದು ಈ ವೇಳೆ ಕೆ 1 ಜಂಕ್ಷನ್ ಬಳಿಯ ಡಿವೈಡರ್ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ಪ್ರವೇಶಿಸುತ್ತಿದ್ದ ಸ್ಕೂಟಿಗೆ ಢಿಕ್ಕಿ ಹೊಡೆದಿದೆ.

ಕಾರು ಢಿಕ್ಕಿ ಹೊಡೆದ ರಭಸಕ್ಕೆ ಸ್ಕೂಟಿ ಸವಾರ ಮೇಲಕ್ಕೆ ಹಾರಿ, ಹೆಲ್ಮಟ್ ಸಮೇತವಾಗಿ ಕಾರಿನ ಮುಂಭಾಗದ ಗಾಜಿಗೆ ಬಿದ್ದು ಅಲ್ಲಿಂದ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಗಂಭೀರ ಗಾಯಗೊಂಡು ಅರೆ ಪ್ರಜ್ಞಾವಸ್ಥೆ ತಲುಪಿದ್ದ ಸ್ಕೂಟಿ ಸವಾರನನ್ನು ಮೂಳೂರು ಎಸ್.ಡಿ.ಪಿ.ಐ ಅಂಬುಲೆನ್ಸ್ ಮೂಲಕ ಜಲಾಲುದ್ದೀನ್ ಉಚ್ಚಿಲ ಮತ್ತು ಹಮೀದ್ ಮುಳೂರು ಉಡುಪಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಆಸ್ಪತ್ರೆ ತಲುಪುವಷ್ಟರಲ್ಲಿ ಗಾಯಾಳು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಅಪಘಾತದಿಂದಾಗಿ ಕೆಲಕಾಲ ಹೆದ್ದಾರಿ ಸಂಚಾರದಲ್ಲಿ ವೃತ್ಯಯವುಂಟಾಯಿತು. ಕಾಪು ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದ್ದು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.