Home Crime ಪುತ್ತೂರು: ಇನ್ಸಾಗ್ರಾಂನಲ್ಲಿ ಕಿರಿಕಿರಿ: ಸ್ಕೂಟರ್ ಗೆ ಕಾರು ಡಿಕ್ಕಿ ಹೊಡೆಸಿ ಹಲ್ಲೆ : ದೂರು ದಾಖಲು…!!

ಪುತ್ತೂರು: ಇನ್ಸಾಗ್ರಾಂನಲ್ಲಿ ಕಿರಿಕಿರಿ: ಸ್ಕೂಟರ್ ಗೆ ಕಾರು ಡಿಕ್ಕಿ ಹೊಡೆಸಿ ಹಲ್ಲೆ : ದೂರು ದಾಖಲು…!!

ಪುತ್ತೂರು : ಇನ್ಸಾಗ್ರಾಮ್ ಮೂಲಕ ಕರೆ ಮಾಡಿ ಬರ ಹೇಳಿ ಬಳಿಕ ಕಿರುಕುಳ ನೀಡಿದಲ್ಲದೇ ಕಾರಿನಲ್ಲಿ ತನ್ನ ಸ್ಕೂಟ‌ರ್ ಗೆ ಢಿಕ್ಕಿ ಹೊಡೆದು ಹಲ್ಲೆ ನಡೆಸಿದ ಆರೋಪದಡಿ ಯುವಕನ ವಿರುದ್ಧ ಯುವತಿ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯ ಬೆಟ್ಟಂಪಾಡಿಯ ಖುತ್ವಿಕ್ ವಿರುದ್ಧ ದೂರು ದಾಖಲಾಗಿದೆ.

ಆರೋಪಿಗೆ ಸುಮಾರು ಒಂದು ವರ್ಷದಿಂದ ಬನ್ನೂರಿನ ಯುವತಿಯ ಪರಿಚಯ ಇದ್ದು ಆತ ವಿನಾ ಕಾರಣ ತೊಂದರೆ ನೀಡುತ್ತಿದ್ದಾನೆ ಎಂದು ಆಕೆ ಮೂರು ತಿಂಗಳಿನಿಂದ ಮಾತು ಬಿಟ್ಟಿದ್ದಳು. ಕೆಲ ದಿನ ಹಿಂದೆ ಖುತ್ವಿಕ್ ಇನ್ ಸ್ಟಾಗ್ರಾಂ ಮೂಲಕ ಕರೆ ಮಾಡಿ ಯುವತಿಯನ್ನು ಪುತ್ತೂರು ರೈಲ್ವೆ ನಿಲ್ದಾಣಕ್ಕೆ ಬರ ಹೇಳಿದ್ದಾನೆ. ಆಕೆ ಬಂದ ನಂತರ ಅಲ್ಲಿಂದ ರಾತ್ರಿ 7.30 ಕ್ಕೆ ಹೊಟೇಲ್ ವೊಂದಕ್ಕೆ ತೆರಳಿ ಊಟ ಮಾಡಿದ್ದಾರೆ.

ಅಲ್ಲಿ ಖುತ್ವಿಕ್ ಯುವತಿಯ ಜತೆ ಗೆಳೆಯ ಕಿರಣ್ ನ ಕಾರಿನಲ್ಲಿ ಮರಳಿ ರೈಲು ನಿಲ್ದಾಣದ ಕಡೆಗೆ ಬಂದಿದ್ದು, ಈ ವೇಳೆ ಆರೋಪಿಯು ಯುವತಿಗೆ ಹಲ್ಲೆ ನಡೆಸಿದ್ದಾನೆ. ಈ ಹಿಂದೆ ಭವಿತ್ ಎಂಬಾತ ಸುಳ್ಯ ಠಾಣೆಯಲ್ಲಿ ಖುತ್ವಿಕ್ ವಿರುದ್ಧ ದೂರು ನೀಡಿದ್ದು ಇದಕ್ಕೆ ಯುವತಿ ಬೆಂಬಲಿಸಿದ್ದಾಳೆ ಎಂದು ಆರೋಪಿಸಿ ಹಲ್ಲೆಗೆ ಯತ್ನಿಸಿದ್ದಾನೆ. ಭವಿತ್ ಗೆ ಕರೆ ಮಾಡಿ ಖುತ್ವಿಕ್ ಗೆ ಸಪೋರ್ಟ್ ಇದ್ದೇನೆ ಎಂದು ಹೇಳಬೇಕು. ಇಲ್ಲದಿದ್ದರೆ ಇಬ್ಬರನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಸಿದ್ದಾನೆ.

ಈ ವೇಳೆ ಕಾರಿನಲ್ಲಿದ್ದ ಕಿರಣ್ ಎಂಬಾತ ಖುತ್ವಿಕ್ ನನ್ನು ತಡೆದಿದ್ದಾನೆ. ಅದಾದ ಬಳಿಕ ಯುವತಿ ಕಾರಿನಿಂದ ಇಳಿದು ಸ್ಕೂಟರ್ ನಲ್ಲಿ ತೆರಳಿದ್ದಾಗ ಖುತ್ವಿಕ್ ಕಾರಿನಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದಾನೆ. ಯುವತಿ ಸ್ಕೂಟರ್ ಸಹಿತ ಚರಂಡಿಗೆ ಬಿದ್ದಿದ್ದು, ಬಳಿಕ ರಿಕ್ಷಾದ ಮೂಲಕ ತಾನು ಕೆಲಸ ನಿರ್ವಹಿಸುತ್ತಿದ್ದ ಕಚೇರಿಗೆ ತೆರಳಿ ಅಲ್ಲಿ ವಿಷಯ ತಿಳಿಸಿ ಪುತ್ತೂರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಯ ಕುರಿತು ಯುವತಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.